ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು

Author : ಉದಯ್ ಕುಮಾರ್ ಹಬ್ಬು

Pages 132

₹ 65.00




Year of Publication: 2012
Published by: ಮಾನಸ ಬುಕ್ ಹೌಸ್
Address: ಕಾವ್ಯಲೋಕ, ಎಚ್.ಐ.ಜಿ-1267, 1ನೇ ತಿರುವು, 2ನೇ ಹಂತ, ಶ್ರೀರಾಮ್ ಪುರ ಎಕ್ಸ್ಟೇನ್, ಮೈಸೂರು-23
Phone: 9448056562

Synopsys

‘ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು’ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಸಿಕೊಳ್ಳುವ ಲೇಖಕ ದೇವನೂರು ಮಹಾದೇವ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೃತಿ. ಲೇಖಕ ಉದಯ್ ಕುಮಾರ್ ಹಬ್ಬು ಸಂಪಾದಿಸಿದ್ದಾರೆ. ಇಲ್ಲಿ ಮೊದಲಿಗೆ ‘ದಲಿತ ಸಾಹಿತ್ಯ ನಡೆದು ಬಂದ ದಾರಿ’ ಎಂಬ ಪ್ರಾಸ್ತಾವಿಕ ನುಡಿಗಳಿವೆ. ದೇವನೂರರ ಸಣ್ಣ ಕಥೆಗಳಾದ ದ್ಯಾವನೂರು, ಮಾರಿಕೊಂಡವರು, ಗ್ರಸ್ಥರು, ಒಂದು ದಹನದ ಕತೆ, ದತ್ತು, ಡಾಂಬರು ಬಂದುದು, ಮೂಡಲ ಸೀಮೆಲಿ ಕೊಲೆ, ಗಿಲೆ ಮುಂತಾಗಿ, ಅಮಾಸ ಕತೆಗಳಿವೆ. ಜೊತೆಗೆ ಒಡಲಾಳ, ಕುಸುಮಬಾಲೆ ಕಾದಂಬರಿಗಳಿದ್ದು, ಉಪಸಂಹಾರ, ದಲಿತ ಸಮಾಜದ ಒಳ ವಿಮರ್ಶಕ ಹಾಗೂ ದೇವನೂರ ಮಹಾದೇವರ ಸಣ್ಣಕಥೆಗಳು ಎಂಬ ಲೇಖನಗಳು ಸಂಕಲನಗೊಂಡಿವೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books