ದೆವ್ವದ ಬಾವಿ

Author : ಸ್ವಾಮಿರಾವ್ ಕುಲಕರ್ಣಿ

Pages 96

₹ 80.00




Year of Publication: 2020
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಮುಖ್ಯ ರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ 

Synopsys

ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಈ ಮೊದಲೇ ಬರೆದ ‘ದೆವ್ವದ ಬಾವಿ’ ಶೀರ್ಷಿಕೆಯ ಕಾದಂಬರಿಯನ್ನು ಸ್ವತಃ ಲೇಖಕರೇ  ನಾಟಕಕ್ಕೆ ಅದೇ ಶೀರ್ಷಿಕೆಯಡಿ ರೂಪಾಂತರಿಸಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಲೆಖಾನ್ ಎಂಬ ತಮ್ಮ ಹುಟ್ಟೂರಿನಲ್ಲಿದ್ದ ‘ದೇವರ ಬಾವಿ’ಯನ್ನು ಕೇಂದ್ರೀಕರಿಸಿ ಕಾದಂಬರಿಯಲ್ಲಿ ಹೆಣೆದ ಕಥಾ ವಸ್ತುವನ್ನುಸಾಹಿತ್ಯ ಬೇರೊಂದು ರೂಪದಲ್ಲಿ ಕಟ್ಟಿಕೊಡಲು ಸಾಧ್ಯವಾಗುವ ಬಗ್ಗೆ ಲೇಖಕರು ವಿಚಾರಿಸಿದ್ದೇ ಈ ನಾಟಕ ರೂಪುಗೊಳ್ಳಲು ಕಾರಣ. ಮೂರು ತಲೆಮಾರುಗಳನ್ನು ಪ್ರತಿನಿಧಿಸುವ ಈ ‘ದೇವರ ಬಾವಿ’ ಜನಸಾಮಾನ್ಯರ ವಿಚಾರಗಳ ಸಂಘರ್ಷ-ತರ್ಕ ಹಾಗೂ ಸಾಂಪ್ರದಾಯಿಕ ನಡೆಯಿಂದಾಗಿ ಅದು ‘ದೆವ್ವದ ಬಾವಿ’ ಯಾಗಿ ಮುಂದುವರಿಯುತ್ತದೆ. ಅಚ್ಚರಿಯ ಸಂಗತಿ ಎಂದರೆ ಮೂರೂ ತಲೆಮಾರಿನವರು ಇದೇ ದೆವ್ವದ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು. ಕಾಲಕ್ರಮೇಣ ಇವರ ಆತ್ಮಹತ್ಯೆಗೆ ಕಾರಣಗಳು ಬೇರೆ ಬೇರೆ ಯಾಗಿರಬಹುದು. ಆದರೆ, ಅಂತಿಮವಾಗಿ ಈ ‘ದೆವ್ವದ ಬಾವಿ’ಯು ಈ ಜನರ ಉನ್ನತಿ ಹಾಗೂ ಅವನತಿಗೆ ಮೂಲ ಕಾರಣವಾಗುವ ಪರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. 

ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಹೀಗೆ ವೈವಿಧ್ಯಮಯವಾದ ಸಾಹಿತ್ಯಕ ಅಂಶಗಳಿಂದಾಗಿ ಇಲ್ಲಿಯ ನಾಟಕವು ಓದು ಹಾಗೂ ದೃಶ್ಯ ಮಾಧ್ಯಮದ ಮೂಲಕವೂ ಗಮನ ಸೆಳೆಯುತ್ತದೆ. 

 

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books