ಧನಂಜಯ ಶಿಲ್ಪಿ

Author : ವೀರೇಶ ಬಡಿಗೇರ

Pages 24

₹ 15.00




Year of Publication: 2004
Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಮೇಲ್ಮನೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು -560002

Synopsys

ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯ ಶಿಲ್ಪಿ ಚಿಕ್ಕಂದಿನಿಂದಲೂ ಮಣ್ಣಿನ ಮೂರ್ತಿಗಳನ್ನು ರಚಿಸಿ ಅಕ್ಕಪಕ್ಕದವರನ್ನು ಬೆರಗುಗೊಳಿಸುತ್ತಿದ್ದರು. ಗುಲಬರ್ಗಾದ ದೊಡ್ಡಪ್ಪ ಅಪ್ಪ ಅವರ ಅಮೃತಕಲಾ ವಿಗ್ರಹ, ಸಿಂಧಿಯಾ ನ್ಯಾವಿಗೇಷನ್ ಕಂಪನಿಯ ಅಮೃತಶಿಲೆಯ ಅರ್ಧಮಟ್ಟದ ಪುತ್ಥಳಿಗಳು. ಗೋವಾದ ಫಾದರ್ ರೋಜಾ ಅಮೃತಶಿಲಾ ಪುತ್ಥಳಿ, ಪಂಪ, ರನ್ನ, ಅತ್ತಿಮಬ್ಬೆ ಉಬ್ಬು ಶಿಲ್ಪಗಳು (ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ) ಎಲ್ಲರ ಮೆಚ್ಚುಗೆಗೆ ಪಾತ್ರವಾದದ್ದು ‘ತಾಯಿ ಮತ್ತು ಮಗು’ ಶಿಲ್ಪ- ಹೀಗೆ ಅವರ ಜೀವನ-ವ್ಯಕ್ತಿತ್ವ ದರ್ಶನ ಮಾಡಿಸುವ ಕೃತಿ ಇದಾಗಿದೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books