ದಂಗೆಯ ದಿನಗಳು

Author : ರವಿ ಬೆಳಗೆರೆ

Pages 298

₹ 150.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಸಿಪಾಯಿ ದಂಗೆ ಭಾರತದಲ್ಲಿ ನಡೆದಂತಹ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಇತಿಹಾಸದಲ್ಲಿ ದಾಖಲಾಗಿರುವಂತಹ ಘಟನೆ. ಈ ಘಟನೆಯ ಕುರಿತು ಮರಾಠಿಯ ಪ್ರಸಿದ್ಧ ಲೇಖಕರಾಗಿರುವಂತಹ ಮನೋಹರ್ ಮಳಗಾಂವ್ಕರ್ ಬರೆದಿರುವಂತಹ ಪುಸ್ತಕದ ಕನ್ನಡಾನುವಾದ ‘ದಂಗೆಯ ದಿನಗಳು’. ನಿವೃತ್ತ ಸೈನ್ಯಾಧೀಕಾರಿಯಾದ ಮನೋಹರ್ ಅವರು ಇತಿಹಾಸದ ಕುರಿತು ಅಪಾರವಾದ ಒಲವು ಉಳ್ಳಂತಹ ವ್ಯಕ್ತಿ. ಸಿಪಾಯಿ ದಂಗೆಯ ಸಮಯದಲ್ಲಿ, ದಂಗೆಯಲ್ಲಿ ಭಾಗವಹಿಸಿದಂತಹ ಸೈನಿಕರ ನಿಸ್ಸಹಾಯಕತೆ, ಕ್ರೌರ್ಯ, ನಿಷ್ಠೆ, ಪ್ರತಿಭಟನೆ, ಮೋಸ, ಸಣ್ಣತನ ಮತ್ತು ಔದಾರ್ಯಗಳ ಕುರಿತು ಈ ಪುಸ್ತಕ ವಿವರಿಸುತ್ತದೆ. ಸಿಪಾಯಿ ದಂಗೆಯ ಕಾರಣಗಳ ಕುರಿತು, ದಂಗೆಯ ಮೊದಲ ಸುಳಿವಿನ ಕುರಿತು, ದಂಗೆ ಏಳಲು ಯಾವ ರೀತಿಯ ಸಿದ್ಧತೆಗಳು ನಡೆದವು ಎಂಬುದರ ಕುರಿತು ಈ ಪುಸ್ತಕ ವಿವರಿಸುತ್ತಾ ಹೋಗುತ್ತದೆ. ಸಿಪಾಯಿ ದಂಗೆ ಸಂಪೂರ್ಣ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿ ಆಗಿಲ್ಲವಾದರೂ, ಬ್ರಿಟೀಷರ ಎದು ನಿಂತು ಬಡಿದಾಡುವ ತಾಕತ್ತು ಭಾರತೀಯರಿಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಂತಹ ಘಟನೆ. ಇಂತಹ ಉತ್ತಮ ಕೃತಿಯ ಕನ್ನಡ ಅನುವಾದವನ್ನು ರವಿ ಬೆಳಗೆರೆಯವರು ಕನ್ನಡಿಗರಿಗೆ ನೀಡಿದ್ದಾರೆ. ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಓದುಗರಿಗೆ ರೋಚಕವಾಗಿರುವ ನಿರೂಪಣೆ ಈ ಪುಸ್ತಕದಲ್ಲಿ ದೊರೆಯಲಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books