ಧರೆಹೊತ್ತಿ ಉರಿದಾಗ ಸಂಪುಟ 1

Author : ಆರ್‌.ಕೆ. ಹುಡಗಿ (ರಾಹು)

Pages 392

₹ 400.00




Year of Publication: 2015
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಲೇಖಕ ಅಲೋಕ್ ಭಲ್ಲಾ ಅವರು 1993 ರಲ್ಲಿ ಸಂಕಲಿಸಿದ್ದ 46 ಕತೆಗಾರರ ಬೃಹತ್ ಸಂಪುಟವು  ಆರ್‌.ಕೆ. ಹುಡಗಿ (ರಾಹು) ಅವರಿಂದ ಅನುವಾದಿತಗೊಂಡು ಕನ್ನಡದಲ್ಲಿ ಧರೆಹೊತ್ತಿ ಉರಿದಾಗ ಎಂಬ ಹೆಸರಿನ ಮೂರು ಭಾಗಗಳಲ್ಲಿ ಪ್ರಕಟಗೊಂಡಿದೆ.

ಅಲೋಕ್ ಭಲ್ಲಾ ಸಂಪಾದಿಸಿರುವಧರೆಹೊತ್ತಿ ಉರಿದಾಗ’ ಭಾರತ ವಿಭಜನೆಯ ದುರಂತ ಕಥೆಗಳಿವೆ. ಅಶ್ಫಾಕ್ ಅಹ್ಮದ್, ನರೇಂದ್ರನಾಥ ಮಿತಾ, ಸಾದತ್ ಹಸನ್ ಮಾಂಟೋ, ಎಸ್. ಎಚ್. ವಾತ್ಸಾಯನ ಅಜ್ಞೇಯ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ.

ಗಾಳಿ ಬಿತ್ತಿ ಬಿರುಗಾಳಿ ಬೆಳೆದವರು, ನಿಯತ್ತು, ಪ್ರತೀಕಾರ, ಮನೆ-ಮಾಲೀಕ, ಡ್ರೆಸ್ಸಿಂಗ್ ಟೇಬಲ್, ಹಿಂಡನ್ನಗಲಿದ ಹಕ್ಕಿಗಳು, ಲಾಜವಂತಿ, ಬೆಲೆ ಹುಡುಕಿ ಹೋದರು, ನೆಲೆಯೂ ಕಳೆದುಕೊಂಡರು, ತಣ್ಣನೆಯ ಮಾಂಸ, ಭಾರತದಿಂದ ಒಂದು ಪತ್ರ,  ಜನಸೇವಕ, ಪಾಕಿಸ್ತಾನದ ಆಗಂತುಕ ಹೀಗೆ ಸುಮಾರು 22 ಕತೆಗಳನ್ನು ಮೊದಲ ಭಾಗ ಒಳಗೊಂಡಿದೆ.

About the Author

ಆರ್‌.ಕೆ. ಹುಡಗಿ (ರಾಹು)

ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ.ಹುಡುಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಧಾರವಾಡ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು ​​​​​​. ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ.  ...

READ MORE

Related Books