ಧರ್ಮದ ಕುರಿತು

Author : ಸುಮಂಗಲಾ

Pages 40

₹ 40.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ ಬೆಂಗಳೂರು-560001

Synopsys

‘ಧರ್ಮದ ಕುರಿತು’ ಕೃತಿಯು ಅಜಯ ಕುಮಾರ ಸಿಂಹ ಅವರ ಬರಹಗಳ ಕೃತಿಯಾಗಿದೆ.  ಲೇಖಕಿ ಸುಮಂಗಲಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮತಧರ್ಮದ ಬಗ್ಗೆ ಜನಾಂಗೀಯ ಸಂಘರ್ಷವು ಉತ್ತುಂಗಕ್ಕೇರಿದ ದಿನಗಳಿಂದ ಇಂದಿನ ಸನ್ನಿವೇಶಕ್ಕೆ ತಕ್ಕುದಾದ ಪುಸ್ತಕವಿದು. ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಖಂಡಿತ ಎಂಬ ಸಂದೇಶ ಈ ಕೃತಿಯಲ್ಲಿ‌ದೆ. ಎಲ್ಲ ಮತಧಾರ್ಮಿಕ ಮುಖಂಡರು ಪರಸ್ಪರ ಕೋಮುಭಾವನೆ ಕೆರಳಿಸುವ ದಿಕ್ಕಿನಿಂದ ಸೌಹಾರ್ದತೆಯತ್ತ ಹೆಜ್ಜೆ ಹಾಕಬೇಕಾದ ಅಗತ್ತ ಇಂದು ಎದುರಾಗಿದೆ. ಈ ಕುರಿತು ಸೂಕ್ಷ್ಮವಾಗಿ ಪೊಲೀಸ್ ಅಧಿಕಾರಿಯೊಬ್ಬರ ಮನದಾಳದ ಮಾತುಗಳು ಇಲ್ಲಿವೆ.

About the Author

ಸುಮಂಗಲಾ
(21 July 1967)

ಲೇಖಕಿ, ಕತೆಗಾರ್ತಿ ಮತ್ತು ಅನುವಾದಕಿ ಸುಮಂಗಲಾ ಶಿವಮೊಗ್ಗದ ಸಾಗರದವರು. "ಚರ್ನೋಬಿಲ್ ಪ್ರಾರ್ಥನೆ" ಅವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ. ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ಕಾಣಿಸಿಕೊಂಡವು. ತದನಂತರ 2005ರಲ್ಲಿ ಜುಮುರು ...

READ MORE

Related Books