ಧರ್ಮದರ್ಶಿ ಹರಿಕೃಷ್ಣ ಪುನರೂರು

Author : ಜಯರಾಮ ಕಾರಂತ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ - ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹನ್ನೊಂದನೆಯ ಪುಸ್ತಕ ’ಸಮಾಜ ಸೇವೆ ಇನ್ನೊಂದು ಹೆಸರು ಧರ್ಮದರ್ಶಿ ಹರಿಕೃಷ್ಣ ಪುನರೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಯಕ್ಷರಾಗಿದ್ದ ಹರಿಕೃಷ್ಣ ಪುನರೂರು ಅವರು ಹೊರನೋಟದಲ್ಲಿ ಅಥವಾ ಸಂಪರ್ಕದಲ್ಲಿ ತುಸು ಒರಟೆನ್ನುವ ಹಾಗೆ ನಡೆದ ಮುಖವಾಡ ಧರಿಸದ ವ್ಯಕ್ತಿ. ಅಂತರಂಗದಲ್ಲಿ ಇನ್ನೊಬ್ಬರ ಕಷ್ಟಕ್ಕೆ ಕರಗುವ ಜೀವದ್ರವ್ಯದ ಮತ್ತು ಕೈಲಾದವರಿಗೆ ಕೈಮೀರಿ ನೆರವಾಗುವ ಔದಾರ್ಯದ ಮೂರ್ತಿ. ಪುನರೂರನ್ನು ಒಪ್ಪಿಕೊಂಡವರಿಗೂ, ಒಪ್ಪಿಕೊಳ್ಳದವರಿಗೂ ಅವರು ಸದಾ ಆಕರ್ಷಣೆಯ ಕೇಂದ್ರ. ನಡೆನುಡಿಗಳು ವೈಭವೀಕರಣಕ್ಕೆ ಒಳಗಾದ ಹಾಗೆ ಅವು ಅನೇಕರ ಟೀಕೆಗೂ ಅಸೂಯೆಗೂ ಕಾರಣವಾಗಿವೆ. ಆದರೆ ಅವರು ತೊಡಗಿಸಿಕೊಂಡ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಹಿತ್ಯಸೇವೆಯ ಚಟುವಟಿಕೆಗಳಲ್ಲಿನ ನಿಸ್ಪೃಹತೆ ಮತ್ತು ಅವರ ಒಟ್ಟು ಕೊಡುಗೆಗಳ ಮೊತ್ತದ ಬಗ್ಗೆ ಭಿನ್ನಾಭಿಪ್ರಾಯ ಇರಲಾರದು ಎನ್ನುವ ವ್ಯಕ್ತಿತ್ವ ಅವರದ್ದು. ಸಮಾಜ ಸೇವೆಗೆ ಇನ್ನೊಂದು ಹೆಸರು ಧರ್ಮದರ್ಶಿ ಹರಿಕೃಷ್ಣ ಪುನರೂರು ಕೃತಿಯು ಅವರ ಜೀವನ-ಸಾಧನೆಯನ್ನು ಕಟ್ಟಿಕೊಡುತ್ತದೆ.

About the Author

ಜಯರಾಮ ಕಾರಂತ

ಕವಿ, ಕತೆಗಾರ ಜಯರಾಮ ಕಾರಂತರು ಪತ್ರಕರ್ತರಾಗಿ ಜನಪ್ರಿಯ. ಪ್ರತಿಭಾವಂತ ಬರೆಹಗಾರ. ಬದುಕಿನ ತಲ್ಲಣ ಮತ್ತು ಅದರಿಂದ ಹೊರಬರಲು ತವಕಿಸುವ ಕ್ಷಣದ ನಡುವಿನ ಅನುಭವ ಮತ್ತು ಅನುಭಾವವನ್ನು ಅವರಷ್ಟು ಸೂಕ್ಷ್ಮವಾಗಿ ನವಿರಾಗಿ ಹೇಳುವ ಕವಿಗಳು ಅಪರೂಪ. ’ವಲಸೆ ಬಂದ ಹಕ್ಕಿ’, ’ನೆಲಗುಲಾಬಿಯ ಹುಟ್ಟು’, 'ಬಿದ್ದ ಪ್ರತಿಮೆ’, ’ಮುಕ್ಕಾಲು ಪದ್ಯಗಳು' ಅವರ ಕವನ ಸಂಗ್ರಹಗಳು. ’ನಾಯಕನಿಗೆ ನಮನ’, ’ಉಡುಪಿ ಜಿಲ್ಲೆಯ ಕಾವ್ಯ’, ’ಮುದ್ದಣ್ಣನಿಗೆ ನಮನ’, ’ಮೊಗಸಾಲೆ ಐವತ್ತರ ಹೊತ್ತಿಗೆ’, ’ಮುದ್ದಣ ಪುರಸ್ಕಾರ' ಮೊದಲಾದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ನೂರಾರು ಮುಕ್ಕಾಲು ಪದ್ಯಗಳನ್ನು ಬರೆದಿರುವ ಅವರು ಇಂಥ ಒಂದು ಹೊಸ ಛಂದಸ್ಸಿನ ರೂವಾರಿ. ...

READ MORE

Related Books