ಧ್ಯಾನಸೂತ್ರ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 152

₹ 100.00




Year of Publication: 2014
Published by: ಉದಯ ಪ್ರಕಾಶನ
Address: #984, 11ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010
Phone: 08023389143

Synopsys

‘ಧ್ಯಾನಸೂತ್ರ’ ಸಾಂಸ್ಕೃತಿಕ ಅನುಸಂಧಾನದ ಮೂಲಚಿಂತನೆಯ ಹಿರಿಯ ಲೇಖಕ, ಚಿಂತಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಕೃತಿ. ಭಾರತವು ಅವಸರ್ಪಿಣೀ ಕಾಲದಲ್ಲಿದೆ. ಇದು ನಮ್ಮನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಿದೆ. ಇದರಿಂದ ಪಾರಾಗುವುದು ಅವಶ್ಯ. ಮಲ್ಲೇಪುರಂ ಅವರ ಈ ಕೃತಿಯು ಅವಸರ್ಣಣಿಯನ್ನು ತಗ್ಗಿಸಿ ಉತ್ಸರ್ಪಿಣೆಯ ಕಡೆ ಕರೆದೊಯ್ಯುವ ಧ್ಯಾನದ ಕಿಂಡಿಯಾಗಿದೆ. ಇಲ್ಲಿರುವ ಕಿರು ಬರಹಗಳು ನಮ್ಮನ್ನು ಆರ್ದ್ರಗೊಳಿಸುತ್ತವೆ. ಪ್ರಚೋದಿಸುತ್ತವೆ. ಅನುಭವ, ಪ್ರತ್ಯಕ್ಷ ದರ್ಶನ, ಮನುಷ್ಯನ ಅಸೀಮ ಪ್ರತಿಭೆ, ನಿಸರ್ಗದ ವಿಸ್ಮಯ, ಭಾಷೆ-ಸಂಸ್ಕೃತಿಗಳ ಹರಹು, ಇಂಥ ಹೆದ್ದಾರಿ- ಕಿರುದಾರಿಗಳ ಕಡೆ ನಮ್ಮನ್ನು ಕರೆದೊಯ್ಯುವ ಇಲ್ಲಿಯ ಬರಹಗಳನ್ನು ಓದುವುದೇ ಒಂದು ವಿಶೇಷ ಅನುಭವ ಎನಿಸುತ್ತದೆ.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books