ದಿನಕರ ದೇಸಾಯಿಯವರ ಸಾಹಿತ್ಯ

Author : ಬರಗೂರು ರಾಮಚಂದ್ರಪ್ಪ

Pages 90

₹ 7.00




Year of Publication: 1992
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು- 560002

Synopsys

‘ದಿನಕರ ದೇಸಾಯಿಯವರ ಸಾಹಿತ್ಯ’ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಮಹತ್ವದ ಕೃತಿ. ಈ ಕೃತಿಯ ಪ್ರಧಾನ ಸಂಪಾದಕರು ಬರಗೂರು ರಾಮಚಂದ್ರಪ್ಪ. ಸಾಮಾಜಿಕ ಕ್ರಿಯಾತ್ಮಕತೆಯಿಂದ ನಮ್ಮ ನಾಡಿನ ನೆನಪಿನಲ್ಲಿ ಉಳಿಯುವಂಥ ಕೆಲಸ ಮಾಡಿ ಸಾಂಸ್ಕೃತಿಕ ನೆಲೆಯಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಒಡಮೂಡಿಸಿದ ದಿನಕರ ದೇಸಾಯಿ ಅವರ ಸಾಹಿತ್ಯದ ಸೃಜನಾತ್ಮಕ ವಿಮರ್ಶಾ ಕೃತಿ ಇದು.

ಈ ಕೃತಿಯಲ್ಲಿ ದಿನಕರ ದೇಸಾಯಿ ಅವರು ಕಟ್ಟಿದ ಹೋರಾಟಗಳು, ಡಾ. ದಿನಕರ ದೇಸಾಯಿಯವರ ಭಾವಗೀತೆಗಳಲ್ಲಿ ಜನಪರ ಅಭಿವ್ಯಕ್ತಿ, ದಿನಕರ ದೇಸಾಯಿ ಅವರ ಚೌಪದಿಗಳಲ್ಲಿ ಸಾಮಾಜಿಕ ರಾಜಕೀಯ ವಿಡಂಬನೆ, ದಿನಕರ ದೇಸಾಯಿಯವರ ಮಕ್ಕಳ ಕವಿತೆಗಳ ಆಶಯ ಮತ್ತು ಅಭಿವ್ಯಕ್ತಿ, ದಿನಕರ ದೇಸಾಯಿಯವರ ಶೈಕ್ಷಣಿಕ ವಿಚಾರಗಳ ನೆಲೆ ಎಂಬ 5 ವಿಭಾಗದ ಲೇಖನಗಳಿವೆ. ಇವು ದಿನಕರ ದೇಸಾಯಿ ಅವರ ಬದುಕು ಬರೆಹಗಳ ಮೇಲೆ ಬೆಳಕು ಚೆಲ್ಲುತ್ತವೆ

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books