ದಿನಕರ ದೇಸಾಯರ ಕಾವ್ಯ

Author : ಗೌರೀಶ ಕಾಯ್ಕಿಣಿ

Pages 100

₹ 25.00




Year of Publication: 1995
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ದಿನಕರ ದೇಸಾಯರ ಕಾವ್ಯ’ ಗೌರೀಶ ಕಾಯ್ಕಿಣಿ ಸಂಗ್ರಹಿಸಿರುವ ಸಮೀಕ್ಷ ಪ್ರಬಂಧಗಳು. ಕೃತಿಗೆ ಮುಮ್ಮಾತುಗಳನ್ನು ಬರೆದಿರುವ ಗೌರೀಶ ಕಾಯ್ಕಿಣಿ ಅವರು ಡಾ. ದಿನಕರ ದೇಸಾಯರ ಕಾವ್ಯ ಪ್ರಪಂಚದ ಬಗೆಗೆ ಆಗೀಗ ಪ್ರಾಸಂಗಿಕವಾಗಿ ನಾನು ಬರೆದ ಬರಹಗಳನ್ನು ಇಲ್ಲಿ ಒಟ್ಟಾಗಿ ಈ ಪುಟ್ಟ ಹೊತ್ತಿಗೆಯ ರೂಪದಲ್ಲಿ ಹೊರತರುತ್ತಿದ್ದೇನೆ. ಇದಕ್ಕೆ ನನ್ನ ಕವಿಮಿತ್ರರೂ ಸಮರ್ಥ ಪ್ರಕಾಶಕರೂ ಆದ ಶ್ರೀವಿಷ್ಣು ನಾಯ್ಕರ ಅನುಗ್ರಹದ ಆಗ್ರಹವೇ ಮೂಲ ಪ್ರಚೋದನೆ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಈ ಸಂಕಲನದಲ್ಲಿ ದಿನಕರರ ಚೌಪದಿಗಳ ಕುರಿತು ನಾನು ಸೇರಿಸಿದ ಲೇಖನ(ಚೌಪದಿಗಳ ಚೌಕಶಿ) ಮಾತ್ರ ಈ ಸಂಕಲನಕ್ಕಾಗಿಯೇ ಅದೂ ಪ್ರಿಯ ವಿಷ್ಣು ನಾಯ್ಕರ ಸಲಹೆ ಮೇರೆಗೆ-ಬರೆದದ್ದು. ಕವಿ ದಿನಕರರ ಚುಟುಕುಗಳ ವಿಸ್ತಾರ ಅಪಾರ. ಕ್ಷಿತಿಜದ ತಂತಿಯೇ ಅದರ ಅಂತ್ಯವನ್ನೂ ಮೀಟಬಲ್ಲದು. ಕನ್ನಡದಲ್ಲಿ ಗೀಚಿದ್ದೆಲ್ಲ ಶ್ರೀಗಂಧ. ಎಂದಿದ್ದಾರೆ ದಿನಾಕರರು. ಈ ಮಾತನ್ನು ಕನ್ನಡದ ಸೌಂದರ್ಯವನ್ನು ಹೊಗಳಲು ಅವರು ಹೇಳಿದ್ದು. ಆದರೂ ಇದು ಅವರ ಈ ಚೌಪದಿಗಳ ರೂಪ ಗುಣಶೀಲಕ್ಕೂ ಯಥಾರ್ಥವಾಗಿ ಅನ್ವಯಿಸುತ್ತದೆ. ಶ್ರೀಗಂಧದ ಚೆಕ್ಕೆ ಒರಟಾಗಿ-ದೊರಗಾಗಿ ಕಾಣುತ್ತದೆ. ಆದರೆ ಅದನ್ನು ತಿಕ್ಕಿ ತೇದಂತೆ ಅದರ ಸುಗಂಧ ಹೆಚ್ಚು ಹೆಚ್ಚು ಸೂಸುತ್ತದೆ. ಡಾ. ದಿನಕರರ ಚುಟುಕಗಳೆಂಬ ಈ ಚೆಲುವಿನ ಚೆಕ್ಕೆಚೂರುಗಳೂ ಹಾಗೆಯೇ . ಇವುಗಳಲ್ಲಿ ಪದಲಾಲಿತ್ಯದೊಂದಿಗೆ ಅರ್ಥ ಗೌರವ ಹಾಸು ಹೊಕ್ಕಾಗಿಯೇ ಹೆಣೆದು ಹಬ್ಬಿದೆ. ಅದರ ಸೊಗಸನ್ನು ಇಲ್ಲಿ ಆದಷ್ಟು ಸಂಕ್ಷಿಪ್ತದಲ್ಲಿ ನೀಡಲು ಯತ್ನಿಸಿದ್ದೇನೆ ಎಂದಿದ್ದಾರೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books