ಡಾ. ಬಿ.ಆರ್. ಅಂಬೇಡ್ಕರ್ ಹೋರಾಟ ಯಾರ್‍ಯಾರಿಗಾಗಿ?

Author : ಎಚ್.ಎಸ್. ಬೇನಾಳ

Pages 124

₹ 100.00




Year of Publication: 2016
Published by: ಸಹನಾ ಪ್ರಕಾಶನ
Address: #408, ಸಿಐಬಿ ಕಾಲೋನಿ, ಕೇಂದ್ರ ಬಸ್ ನಿಲ್ದಾಣ ಹಿಂಭಾಗ, ಎಂ.ಎಸ್.ಕೆ.ಮಿಲ್ ರಸ್ತೆ, ಕಲಬುರಗಿ-585103
Phone: 9901177823

Synopsys

ಎಚ್.ಎಸ್. ಬೇನಾಳ ಅವರು ಡಾ. ಬಿ.ಆರ್. ಅಂಬೇಡ್ಕರರ ವಿಚಾರಗಳು ಕೇವಲ ಭಾಷಣದ ಸರಕಾಗುತ್ತಿದೆ ಎಂಬ ಆಕ್ರೋಶ ಹಿನ್ನೆಲೆಯಲ್ಲಿ ಮೂಡಿ ಬಂದ ಕೃತಿ -’ಡಾ. ಬಿ.ಆರ್. ಅಂಬೇಡ್ಕರ್ ಹೋರಾಟ ಯಾರ್‍ಯಾರಿಗಾಗಿ?’. ಏಕೆಂದರೆ ಡಾ. ಅಂಬೇಡ್ಕರ್ ಯಾರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಏನು ಎಂಬುದು ಎಲ್ಲರಿಗೂ ಗೊತ್ತಿಲ್ಲ ಎಂಬುದು ಅವರ ವಾದ. ಈ ವಿಚಾರವೇ ಕೃತಿಯ ಹೂರಣ.

ಭಾಗ-1 ರಲ್ಲಿ, ಅಂಬೇಡ್ಕರ್ ಕುರಿತು ಮಾತನಾಡುವವರು ಯಾರು? ಮತ್ತು ಎಂಥವರು?, ಬಂಡವಾಳಶಾಹಿ ಕುರಿತು ಅಂಬೇಡ್ಕರ್ ಅಭಿಯಾನ ಸೇರಿದಂತೆ ಒಟ್ಟು6 ಲೇಖನಗಳಿದ್ದು, ಭಾಗ-2ರಲ್ಲಿ, ಅಂಬೇಡ್ಕರರು ನಡೆದು ಬಂದ ದಾರಿ, ಅಂಬೇಡ್ಕರರ ನುಡಿಮುತ್ತುಗಳು ಹೀಗೆ ಎರಡು ಅಧ್ಯಾಯಗಳಿವೆ. ಡಾ. ಚನ್ನಣ್ಣ ವಾಲೀಕಾರ ಕೃತಿಯ ಮುನ್ನುಡಿಯಲ್ಲಿ ’ರಾಜಕಾರಣಿಗಳು, ಬುದ್ದಿಜೀವಿಗಳು ಎನ್ನಿಸಿಕೊಂಡವರು ಬರೀ ತೋರಿಕೆಗಾಗಿ ಮಾತ್ರ ಡಾ. ಅಂಬೇಡ್ಕರರ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಲೇಖಕರು ಇಂತಹ ಸತ್ಯವನ್ನು ಕೃತಿಯಲ್ಲಿ ಅನಾವರಣ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books