ಡಾ.ಫರ್ಡಿನಾಂಡ್ ಕಿಟೆಲ್

Author : ಶ್ರೀನಿವಾಸ ಹಾವನೂರ

Pages 156

₹ 40.00




Year of Publication: 2009
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜ್ ಷಹಾ ರಸ್ತೆ, ನವದೆಹಲಿ- 110001

Synopsys

ಡಾ. ಶ್ರೀನಿವಾಸ ಹಾವನೂರು ಅವರು ರಚಿಸಿರುವ ಜೀವನ ಚರಿತ್ರೆ ‘ಡಾ.ಫರ್ಡಿನಾಂಡ್ ಕಿಟೆಲ್’ ಕನ್ನಡದ ಖ್ಯಾತನಾಮ ಕವಿ, ಕೋಶಕಾರ ಮತ್ತು ವಿದ್ವಾಂಸರು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ರೆ.ಕಿಟೆಲ್ ಕರ್ನಾಟಕಕ್ಕೆ ಬಂದರು. ಆ ಅವಧಿಯಲ್ಲಿ ಭಾರತೀಯ ಪ್ರಾಚ್ಯ ಇತಿಹಾಸ, ಧರ್ಮ, ಭಾಷೆ, ಸಾಹಿತ್ಯ ಕ್ಷೇತ್ರಗಳಲ್ಲಿ ಯುರೋಪಿಯನ್ ವಿದ್ವಾಂಸರು ಗಣನೀಯ ಮಟ್ಟದಲ್ಲಿ ಕಸಿ ಮಾಡಿದ್ದರು. ದ್ರಾವಿಡ ಭಾಷಾ ವಿಚಾರವಾಗಿ ಕಾಲ್ಡ್ ವೆಲ್: ಶಾಸನ ಶೋಧದಲ್ಲಿ ಬರ್ಗೆಸ್, ಪ್ಲೀಟ್, ಹುಲ್ಷ್, ರೈಸ್ ರು, ಧಾರ್ಮಿಕ ಕ್ಷೇತ್ರದಲ್ಲಿ ಮ್ಯಾಕ್ಸ್ ಮುಲರ್, ಶಿಲ್ಪಕಲಾ ರಂಗದಲ್ಲಿ ಮೆಡೋಜ್-ಟೇಲರ್, ಕಸಿನ್ಸ್, ಫರ್ಗ್ಯೂಸನ್- ಮೊದಲಾದವರ ಕೊಡುಗೆಯಿಂದ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಮಗ್ರವಾಗಿ ರೂಪಿಸುವುದು ಸಾಧ್ಯವಾಯಿತು. ಡಾ.ಕಿಟೆಲ್ ಅವರೂ ಈ ವಿದ್ವತ್ಪ್ರಚಂಡರ ಸಾಲಿನಲ್ಲಿ ಗಣೆಸಲ್ಪಡುತ್ತಿದ್ದರು. ಇತ್ತ ಗುಂಡರ್ಟರು, ಬ್ರೌನರು ಮಲೆಯಾಳಿ, ತೆಲುಗು ಕೋಶಗಳನ್ನು ರಚಿಸಿದ್ದಾಗ, ಕಿಟೆಲರ ಕನ್ನಡ ಕೋಶವು ಹೊರಬಂದಿತು. ಮಾತ್ರವಲ್ಲ ವೈದುಷ್ಯದಲ್ಲಿ ಇವರುಗಳ ಕೃತಿಗಳಿಗಿಂತಲೂ ಮೇಲ್ಪಟ್ಟದ್ದೆನಿಸಿತು. ಪರಿಣಾಮವೆಂದರೆ ಕಿಟೆಲರ ಜೊತೆಗೆ ಕನ್ನಡಕ್ಕೂ ಹೆಚ್ಚಿನ ಮನ್ನಣೆ ದೊರೆಕಿತು. ಈ ಹಿನ್ನೆಲೆಯಲ್ಲಿ ಕಿಟೆಲರ ಜೀವನ ಸಾಧನೆಯನ್ನು ವಿವೇಚಿಸ ಬಯಸಿದೆ. ಇವರಿಗೆ ಹಿರಿಯಣ್ಣನಂತಿದ್ದ, ಅದೇ ಬಾಸೆಲ್ ಮಿಶನ್ನಿನ ಮೈವ್ ಗ್ಲಿಂಗ್ ಕನ್ನಡ ಪತ್ರಿಕೋದ್ಯಮ, ಗಾದೆಗಳ ಸಂಗ್ರಹ, ಪತ್ರ ಸಾಹಿತ್ಯ, ಲಿಪಿಸುಧಾರಣೆ, ಯಕ್ಷಗಾನ, ಹರಿದಾಸ ಸಾಹಿತ್ಯ-ಇವುಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟಿಸಿದ್ದರು. ಅಂತಹ ಕಿಟೆಲ್ ಅವರ ಜೀವನ ಸಾಧನೆಯೊಂದಿಗೆ ಕನ್ನಡ ಸಾಹಿತ್ಯವಾಗಿ ಬೆಳೆದುಬಂದ ದಾರಿಯನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books