ಡಾ. ಮಳಿಯೆ ಗೋಪಾಲಕೃಷ್ಣರಾಯರು

Author : ಜನಾರ್ಧನ ಗುರ್ಕಾರ್

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಏಳನೆಯ ಪುಸ್ತಕ ಅಭಿನವ ಧನ್ವಂತರಿ ಡಾ. ಮಳಿಯೆ ಗೋಪಾಲಕೃಷ್ಣರಾಯರು. ಪರಂಪರಾಗತ ಆಯುರ್ವೇದ ಕ್ಷೇತ್ರವನ್ನು ಶ್ರದ್ದೆಯಿಂದ ರಕ್ಷಿಸಿ ಬೆಳೆಸಿದ ಕೆಲವೇ ಭಾರತೀಯ ಪ್ರಮುಖರಲ್ಲಿ ಮೂಡಬಿದ್ರೆ ಬಳಿಯ ಅಶ್ವತ್ಥಪುರದ ಡಾ. ಚಳಿಗೆ ಗೋಪಾಲಕೃಷ್ಣರಾಯರು ಒಬ್ಬರು. ಯುಗಚೇತನ ಪಂಡಿತ ತಾರಾನಾಥರ ಶಿಷ್ಯರಾದ ಗೋಪಾಲಕೃಷ್ಣರಾಯರು ಆಯುರ್ವೇದ ಶಾಸ್ತ್ರವನ್ನು ತಮ್ಮ ಪತ್ರಿಕೆಗಳು ಹಾಗೂ ಕೃತಿಗಳಲ್ಲಿ ಕೂಡ ಜನಪ್ರಿಯಗೊಳಿಸಿದವರು. ಕನ್ನಡದ ಮೊದಲನೆಯ ಕಾಮವಿಜ್ಞಾನ ಪತ್ರಿಕೆಯಾದ 'ಕಲಿಯುಗ' ಮತ್ತು 'ಪ್ರೇಮಕಲಾ', 'ಪೌರುಷ', 'ಸ್ವರತಿ', 'ಲೈಂಗಿಕ ಸಮಸ್ಯೆಗಳು' ಮತ್ತು 'ಗುಹ್ಯರೋಗಗಳು' ಎಂಬ ಕೃತಿಗಳಲ್ಲಿ ಸ್ವಸ್ಥ ಜೀವನಕ್ಕಾಗಿ ಮಾರ್ಗದರ್ಶನ ನೀಡಿದ ರಾಯರು, ಬೆಂಗಳೂರು ಆಯುರ್ವೇದಿಕ್ ಕಾಲೇಜಿನ ಸ್ಥಾಪಕ ಪ್ರಿನ್ಸಿಪಾಲರಾಗಿ ಆಯುರ್ವೇದ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಚಿಕಿತ್ಸೆಯಲ್ಲಿ ಅಭಿನವ ಧನ್ವಂತರಿಯಾಗಿ ಈ ನಾಡಿನ ಸೇವೆ ಮಾಡಿದವರು. ಅವರ ಜೀವನ ಚರಿತ್ರೆಯಿದು.

About the Author

ಜನಾರ್ಧನ ಗುರ್ಕಾರ್
(26 November 1932 - 12 August 2015)

ದಕ್ಷಿಣ ಕನ್ನಡದ ಬದುಕು ಮತ್ತು ಪ್ರಕೃತಿಯನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿ ಸಾಹಿತ್ಯ ಕೃತಿಗಳಾಗಿಸಿದ ಕಾದಂಬರಿಕಾರ ಜನಾರ್ದನ ಗುರ್ಕಾರ್. ಅವರು 1932 ನವೆಂಬರ್ 26ರಂದು ಮೂಡಬಿದಿರೆಯ ಸಮೀಪದ ಅಶ್ವತ್ಥಪುರದ ಬಳಿಯ ಮುದ್ರಬೆಟ್ಟುವಿನಲ್ಲಿ ಜನಿಸಿದರು. 'ಪರಾವಲಂಬಿ', 'ಕೈಮಾಂಸ', 'ಕಾಂತೆಯರ ಕನಸು', 'ದಂಬನ ನಾರು', 'ಗಂಗಾವತಾರ', 'ಗುಡಿಯ ಸುತ್ತಮುತ್ತ' ಮುಂತಾದ 18 ಕಾದಂಬರಿಗಳು. ಎರಕು ಕಥಾಸಂಕಲನಗಳು; ಪ್ರಬಂಧ, ವಿಚಾರ ಸಾಹಿತ್ಯ ಮುಂತಾದ ಪ್ರಕಾರಗಳ ಆರು ಕೃತಿಗಳು ಜನಾರ್ದನ ಗುರ್ಕಾರರನ್ನು ಕನ್ನಡದ ಒಬ್ಬ ಮುಖ್ಯ ಲೇಖಕರನ್ನಾಗಿ ಸ್ಥಾಪಿಸಿವೆ. ಮೂಡಬಿದ್ರಿಯ ಬಳಿಯ ಅಶ್ವತ್ಥಪುರಕ್ಕೆ ಸಮೀಪವಿರುವ ಮುದ್ರಬೆಟ್ಟಿನಲ್ಲಿ ಜನಿಸಿದ (1932) ಗುರ್ಕಾರ್‌ ರೈಲ್ವೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ...

READ MORE

Related Books