ಕವಿ ಸಿದ್ಧಲಿಂಗಯ್ಯ ಅವರ ಆತ್ಮಕತೆ ’ಊರು ಕೇರಿ’ಯ ಮೊದಲ ಎರಡು ಭಾಗಗಳು ಈ ಸಂಪುಟದಲ್ಲಿ ಸೇರಿವೆ. ಇದು ಸಿದ್ಧಲಿಂಗಯ್ಯ ಅವರ ಸಮಗ್ರ ಸಾಹಿತ್ಯದ ಎರಡನೆಯ ಸಂಪುಟ.
ಕೇವಲ ಕವಿ, ಸಾಹಿತಿ ಮಾತ್ರ ಆಗಿರದೆ ಸಿದ್ಧಲಿಂಗಯ್ಯನವರು ಹಲವು, ಚಳುವಳಿಗಳನ್ನು ರೂಪಿಸಿದ, ಮುನ್ನಡೆಸಿದ ಶಕ್ತಿಯೂ ಆಗಿದ್ದಾರೆ. ಬಂಡಾಯ, ರೈತ ಚಳುವಳಿ, ಬೂಸಾ ಚಳುವಳಿ ಇವೆಲ್ಲವುಗಳಲ್ಲಿ ಅವರ ಕ್ರಿಯಾಶೀಲ ಭಾಗವಹಿಸುವಿಕೆ ಕೆಲಸ ಮಾಡಿದೆ. ಸಿದ್ಧಲಿಂಗಯ್ಯನವರು ತಮ್ಮ ಜೀವನದುದ್ದಕ್ಕೂ ಕಂಡ ಅನುಭವಗಳನ್ನು ಅತ್ಯಂತ ಮಾರ್ಮಿಕವಾಗಿ ಈ ಕೃತಿಯಲ್ಲಿ ವಿವರವಾಗಿ ನಿರೂಪಿಸಿದ್ದಾರೆ.
©2024 Book Brahma Private Limited.