ಡಾ. ವಿಘ್ನೇಶ್ವರ ವರ್ಮುಡಿ

Author : ರವಿಶಂಕರ ಜಿ. ಕೆ.

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 237ನೇ ಪುಸ್ತಕ ಡಾ. ವಿಘ್ನಶ್ವರ ವರ್ಮುಡಿ. ಅಂತಾರಾಷ್ಟ್ರೀಯ ಕೃಷಿ – ಅರ್ಥಶಾಸ್ತ್ರಜ್ಞ ಡಾ. ವಿಘ್ನಶ್ವರ ವರ್ಮುಡಿ ಅಂತಾರಾಷ್ಟ್ರೀಯ ಕೃಷಿತಜ್ಞ ಅರ್ಥಶಾಸ್ತ್ರಜ್ಞ ಡಾ.ವಿಷ್ಟೇಶ್ವರ ವರ್ಮುಡಿ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು; ಪ್ರಸ್ತುತ ಅದೇ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮನ್ನಣೆಯಿರುವ ಕೃಷಿ ತಜ್ಞರಾಗಿರುವ ಅವರ ಕೃತಿಗಳು ಕೂಡ ಈ ಕ್ಷೇತ್ರಕ್ಕೆ ಬಹಳ ಮುಖ್ಯ ಕೊಡುಗೆಗಳಾಗಿವೆ.

About the Author

ರವಿಶಂಕರ ಜಿ. ಕೆ.

ರವಿಶಂಕರ ಜಿ.ಕೆ.(ಜನನ 1991) ವಿವೇಕಾನಂದ ಕಾಲೇಜಿನಲ್ಲಿ ವರ್ಮುಡಿಯವರ ಶಿಷ್ಯರಾಗಿದ್ದವರು. ಪ್ರಸ್ತುತ ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಯುಜಿಸಿಯ ಜೆ.ಆರ್.ಎಫ್. ಶಿಷ್ಯವೇತನದೊಂದಿಗೆ ಕ್ರಿ.ಶ. 850 ರಿಂದ ಕ್ರಿ.ಶ. 1400ರವರೆಗಿನ ಕನ್ನಡ ಸಾಹಿತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 'ಕನ್ನಡ ಸಾಹಿತ್ಯದಲ್ಲಿ ಪ್ರಾಣಿ ರೂಪಕಗಳು: ಅನ್ಯತೆಯ ಅನುಸಂಧಾನ' ಎಂಬ ವಿಷಯದ ಕುರಿತಾಗಿ ಪಿಹೆಚ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಮೊದಲ ಯತ್ನದಲ್ಲಿ ಯುಜಿಸಿ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಮತ್ತು ಕರ್ನಾಟಕ ಸರಕಾರ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಮೊದಲ ಯತ್ನಕ್ಕೆ ತೇರ್ಗಡೆಯಾಗಿದ್ದಾರೆ. ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.ನಲ್ಲಿ ...

READ MORE

Related Books