ದ್ರವ ಬಂಗಾರ ಪೆಟ್ರೋಲ್

Author : ಟಿ. ಆರ್. ಅನಂತರಾಮು

Pages 108

₹ 90.00




Year of Publication: 2011
Published by: ಸಮೃದ್ಧ ಸಾಹಿತ್ಯ
Address: ನಂ. 121, ಮೊದಲನೇ ಮಹಡಿ, 2ನೇಮುಖ್ಯರಸ್ತೆ, 11ನೇ ಬಿ ಅಡ್ಡರಸ್ತೆ, ವಿಠ್ಠಲನಗರ, ಬೆಂಗಳೂರು-56002
Phone: 080- 26747677

Synopsys

ಆಧುನಿಕ ಜೀವನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪ್ರಾಮುಖ್ಯ ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಿದೆ. ಒಂದೇ ಒಂದು ದಿನ ಪೆಟ್ರೋಲ್, ಡೀಸೆಲ್ ಸರಬರಾಜು ನಿಂತುಹೋದರೂ ನಮ್ಮ ಪ್ರಗತಿಯ ಚಕ್ರ ಉರುಳುವುದಿಲ್ಲ. ಸಾರಿಗೆ ಸಂಚಾರವೇ ಅಸ್ತವ್ಯಸ್ತವಾಗುತ್ತದೆ. ಅಡುಗೆ ಅನಿಲ ದೊರೆಯದೇ ಹೋದಲ್ಲಿ ದೇಶದ ಗೃಹಿಣಿಯರೆಲ್ಲ ಕಂಗೆಡುತ್ತಾರೆ. ಸೀಮೆಎಣ್ಣೆ ಎರಡು ದಿನ ತಡವಾದರೂ ಕೆಳ ಮಧ್ಯಮವರ್ಗ ಚಡಪಡಿಸುತ್ತದೆ. ಇವೆಲ್ಲವೂ ಪೆಟ್ರೋಲಿಯಂ ಉತ್ಪನ್ನಗಳೇ. ಕೊಲ್ಲಿ ರಾಷ್ಟ್ರಗಳು ಪೆಟ್ರೋಲ್ ಮೇಲೆ ತೇಲುತ್ತ ಜಗತ್ತನ್ನೇ ನಿಯಂತ್ರಿಸುತ್ತಿವೆ, ಅಭಿವೃದ್ಧಿಶೀಲ ರಾಷ್ಟ್ರಗಳು ಭಾರಿ ವಿದೇಶಿ ವಿನಿಮಯ ತೆತ್ತು ಈ ದ್ರವಬಂಗಾರವನ್ನು ಆಮದು ಮಾಡಿಕೊಳ್ಳಬೇಕು. ಪೆಟ್ರೋಲ್ ಕುರಿತ ಈ ಪುಸ್ತಕ ಕೌಟುಂಬಿಕ ವಾತಾವರಣದಲ್ಲಿ ಸಂವಾದದ ಮೂಲಕ ತೆರೆದುಕೊಳ್ಳುತ್ತದೆ. ಆ ಮೂಲಕ ಪೆಟ್ರೋಲ್ ನ ಇತಿಹಾಸ, ಬಳಕೆ, ಸಂಸ್ಕರಣೆ, ಭಾರತದ ಸಂಪನ್ಮೂಲ, ಗಣಿ ಗಾರಿಕೆ, ನಾಳೆ ನಾವು ರೂಪಿಸಬೇಕಾದ ತಂತ್ರ ಇಂಥ ಪ್ರಮುಖ ಅಂಶಗಳ ಬಗ್ಗೆ ಈ ಕೃತಿಯನ್ನು ಓದಿದವರಿಗೆ ಖಚಿತ ಅಭಿಪ್ರಾಯ ಮೂಡುತ್ತದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books