ದುಪ್ಪಟ್ಟು

Author : ರಾಜಾರಾಂ ತಲ್ಲೂರು

Pages 96

₹ 130.00




Year of Publication: 2020
Published by: ಬಹುರೂಪಿ
Address: ಎಂಬೆಸ್ಸೆ ಸೆಂಟರ್‌, ಮೊದಲ ಮಹಡಿ, ಕ್ರೆಸೆಂಟ್‌ ರಸ್ತೆ, ಕುಮಾರಪಾರ್ಕ್‌ ಪಶ್ಚಿಮ, ಬೆಂಗಳೂರು
Phone: 7019182729

Synopsys

ಇಂದು ಅರೆಜೀವವಾಗಿರುವ ನಾಡಿನ ರೈತ ಎದುರಿಸಬೇಕಾಗಿರುವ ಬವಣೆಗಳ ಪೂರ್ಣ ಚಿತ್ರಣವನ್ನು ಲೇಖಕರು ನೀಡಲು ಮಾಡಿರುವ ‘ಡೆಸ್ಕ್ ಟಾಪ್’ ಪ್ರಯತ್ನಗಳ ಅಕ್ಷರ ರೂಪ ಇದಾಗಿದೆ. ಕೃತಿಯಲ್ಲಿ ಬಹುಮುಖ್ಯವಾಗಿ ಇಂದಿನ ರೈತರು ಅಧೋಗತಿಗೆ ತಲುಪಿರುವ ಕಾರಣಗಳನ್ನು ಚರ್ಚಿಸಿದ್ದು ಮುಂದೆ ರೈತರು ಸಾಗಲಿರುವ ಹಾದಿಗಳ ಚುಕ್ಕಿಗಳನ್ನು ಜೋಡಿಸಿಲಾದ ಚುಕ್ಕಿಚಿತ್ರ ಇದಾಗಿದೆ. 2016ರಿಂದಲೂ ರೈತರಿಗಾಗಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದಿದ್ದ ಲೇಖಕರು ಅದರ ಪೂರ್ಣರೂಪ ಚಿತ್ರಣವನ್ನು ಇಲ್ಲಿ ನೀಡಿದ್ದಾರೆ.

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದ ಅವರು 2000 ಇಸವಿಯಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿ ಪ್ರಾರಂಭಿಸಿದಾಗ ಅದರ ಸುದ್ದಿ ಸಂಪಾದಕರಾಗಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಉದಯವಾಣಿ ಆರೋಗ್ಯ ಪುರವಣಿಯಲ್ಲಿ ಆರಂಭಗೊಂಡಾಗ ಅದರ ಸಂಪಾದಕರಾಗಿ ಸೇವೆಸಲ್ಲಿಸಿದ ಅವರು 2017ರ ತನಕವೂ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ ನೋಡಿಕೊಂಡರು. ಈ ...

READ MORE

Related Books