ದುರುಗ ಸೀಮೆ ಜಾನಪದ

Author : ಮೀರಾಸಾಬಿಹಳ್ಳಿ ಶಿವಣ್ಣ

Pages 476

₹ 600.00




Year of Publication: 2020
Published by: ಪಟೇಲ್ ಪ್ರತಿಷ್ಠಾನ
Address: ಶಾಂತಿನಗರ, ಬೆಂಗಳೂರು

Synopsys

ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಸಂಶೋಧನಾತ್ಮಕ ಲೇಖನಗಳ ಸಂಗ್ರಹ ಕೃತಿ-ದುರುಗಸೀಮೆ ಜಾನಪದ. ಚಿತ್ರದುರ್ಗ ಜಿಲ್ಲೆಯ ಕ್ಷೇತ್ರ ಕಾರ್ಯಧಾರಿತವಾದ ಈ ಕೃತಿಯಲ್ಲಿ ಒಟ್ಟು 60 ಲೇಖನಗಳು ಸಂಕಲನಗೊಂಡಿವೆ. ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲರ ಜಾನಪದ-ಸಂಪ್ರದಾಯ-ಕಟ್ಟೆಮನೆ, ಜಾನಪದ, ಕಲೆ, ಬುಡಕಟ್ಟು ಸಂಸ್ಕೃತಿ, ನಾಯಕ ಜನಾಂಗ, ಮ್ಯಾಸಬೇಡರು, ಎತ್ತಪ್ಪ-ಜುಂಜಪ್ಪ, ಕುಂಚಿಟಿಗ-ಒಕ್ಕಲಿಗ ಸಂಸ್ಕೃತಿ, ಕುರುಬ ಸಂಸ್ಕೃತಿ, ಜಾತ್ರೆ-ಉತ್ಸವ, ಜಾನಪದ ಮತ್ತು ಪ್ರವಾಸೋದ್ಯಮ- ಹೀಗೆ ಸಾಮುದಾಯಿಕ ಜಾನಪದೀಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಲೇಖನಗಳು ಇಲ್ಲಿವೆ. ಜನಾಂಗ ಸಂಸ್ಕೃತಿ ಅಧ್ಯನ ಆಸಕ್ತ ವಿದ್ಯಾರ್ಥಿಗಳಿಗೆ ಬೋಧಕರಿಗೆ ಈ ಕೃತಿಯು ಉಪಯುಕ್ತವಾಗಿದೆ.

About the Author

ಮೀರಾಸಾಬಿಹಳ್ಳಿ ಶಿವಣ್ಣ

ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ  ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು. ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ...

READ MORE

Related Books