ಈ ಭೂಮಿ ಈ ಸಸ್ಯ

Author : ನಾರಾಯಣ ರೆಡ್ಡಿ

Pages 64

₹ 55.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001

Synopsys

ನಾರಾಯಣ ರೆಡ್ಡಿ ಅವರ ಕೃತಿ ‘ಈ ಭೂಮಿ ಈ ಸಸ್ಯ’. ಮಂದ ಬುದ್ಧಿಯವನನ್ನು ತೆಗಳಲು ಅಥವಾ ಚುರುಕಾಗಿ ಕಲಿಯದ ಮಗುವನ್ನು ಮೂದಲಿಸಲು ಆತನ ತಲೆಯಲ್ಲಿ ಬರೀ ಮಣ್ಣು ತುಂಬಿಕೊಂಡಿದೆ! ಎಂಬ ಮಾತನ್ನು ಬಳಸುವುದುಂಟು.ಆದರೆ, ಈ ಪುಸ್ತಕ ಓದಿದ ನಂತರ ಮೇಲಿನಂತೆ ಮೂದಲಿಸುವುದು ಮಣ್ಣಿಗೆ ಮಾಡುವ ಅಪಮಾನ ಎನ್ನಿಸದಿರದು. ಭೂಮಿ ಹಾಗೂ ಮಣ್ಣಿನ ಮಹತ್ವವನ್ನು ಸಾರುವ ಕೃತಿ ಇದು..ಇಂದಿನ ಯುವ ಪೀಳಿಗೆಗೆ ಭೂಮಿ ಹಾಗೂ ಮಣ್ಣಿನ ಪ್ರಾಮುಖ್ಯತೆಯನ್ನು ಸಾರಿ ಹೇಳುವಂತಿದೆ.

About the Author

ನಾರಾಯಣ ರೆಡ್ಡಿ

ಕೃಷಿಕರಾದ ನಾರಾಯಣ ರೆಡ್ಡಿ ಅವರು ಸಾವಯವ ಕೃಷಿಯ ಪ್ರಾಮುಖ್ಯತೆ, ಅಗತ್ಯತೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿ ನುಡಿದಂತೆಯೇ ನಡೆದವರು. ಸಾವಯವ ಕೃಷಿಗೆ ರಾಜ್ಯದಲ್ಲಿ ನೆಲೆ, ಸ್ಥೈರ್ಯ ಎರಡೂ ರೂಪಿಸಿಕೊಟ್ಟವರು. ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದ ಅವರು ಮೂಲತಃ ದೊಡ್ಡಬಳ್ಳಾಪುರದವರು. ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ ಮಾತ್ರವಲ್ಲ ಕೃತಿಗಳನ್ನು ರಚಿಸಿದ್ದಾರೆ. ‘ಸುಸ್ಥಿರ ಕೃಷಿ ಪಾಠಗಳು’ ಅವರ ಪ್ರಕಟಿತ ಕೃತಿ. ...

READ MORE

Related Books