ಎಲ್ಲರೂ ಒಂದಿನ ಹೋಗವ್ರೆ...!

Author : ಸಿದ್ಧರಾಮ ಉಪ್ಪಿನ್

Pages 92

₹ 85.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ಸಿದ್ದರಾಮ ಪೊಲೀಸ್ ಪಾಟೀಲ್ ಅವರ ಪ್ರಬಂಧಗಳ ಕೃತಿ-‘ಎಲ್ಲರೂ ಒಂದಿನ ಹೋಗವ್ರೆ..!. ಮರೆವಿನ ಮಹಾತ್ಮ, ಜಾಗ ಬದಲಾದಾಗ, ಮುನ್ನುಡಿಯ ಮುಜುಗರ, ಒಂದು ಕೆಲಸ ಮಾಡಿ, ನಾ ಮತ್ತೆ ಸಿನಿಮಾಕ್ಕೆ ಹೋದೆ, ಹೆಸರು ಕೇಳಿ ನೋಡೋಣ, ನಾನೇಕೆ ಬರೆಯುತ್ತೇನೆ, ಎಲ್ಲರೂ ಒಂದಿನ ಹೋಗುವವರೇ ಸೇರಿದಂತೆ 14 ಲೇಖನಗಳನ್ನು ಸಂಕಲಿಸಲಾಗಿದೆ. ಮೊನಚಾದ ವಿಚಾರಗಳು, ನವಿರಾದ ಹಾಸ್ಯ-ವಿಡಂಬನೆ, ಸಾಮಾಜಿಕ-ಸಾಂಪ್ರದಾಯಿಕ ಅನುಭವಗಳು ಈ ಎಲ್ಲ ಬರಹಗಳ ಕೇಂದ್ರವಾಗಿದೆ. ಬರಹ ಶೈಲಿಯು ಆಪ್ತವಾಗಿದೆ. ಅತ್ಯುತ್ತಮವಾದ ಬರವಣಿಗೆ ಶೈಲಿಗೆ ಓದಿಸಿಕೊಂಡು ಹೋಗುತ್ತದೆ.

About the Author

ಸಿದ್ಧರಾಮ ಉಪ್ಪಿನ್
(06 June 1952)

ಹಿರಿಯ ಲೇಖಕ ಸಿದ್ಧರಾಮ ಉಪ್ಪಿನ ಮೂಲತಃ ಅವಿಭಜಿತ ವಿಜಯಪುರ ಜಿಲ್ಲೆಯ ಆಲಮೇಲದವರು.ಈಗ ಆಲಮೇಲವೇ ತಾಲೂಕು ಕೇಂದ್ರವಾಗಿದೆ.  ವೃತ್ತಿಯಿಂದ ಕೃಷಿಕರು. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರ. ಬಿ.ಕಾಂ ಶಿಕ್ಷಣವನ್ನು ಹುಬ್ಬಳ್ಳಿಯ ಜೆ.ಜಿ ವಾಣಿಜ್ಯ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. 1996 ರಿಂದ 1999 ರವರೆಗೆ ಕನ್ನಡಪ್ರಭ ತಾಲ್ಲೂಕು ವರದಿಗಾರರಾಗಿ, ಶ್ರೀ ದತ್ತ ನಾಟ್ಯ ವಸ್ತು ಭಂಡಾರದ ಸಂಚಾಲಕರಾಗಿ, ರಂಗ ಪರಿಕರ ಪ್ರಕಾಶನದ ಸಂಚಾಲಕರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1996 ರಿಂದ 1999 ರವರೆಗೆ ಶಹಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ,  1998 ರಿಂದ 2001 ರವರೆಗೆ ತಾಲೂಕಿನ ಕನ್ನಡ ...

READ MORE

Related Books