ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ

Author : ಸಿ. ಬಿ. ಚಿಲ್ಕರಾಗಿ

Pages 164

₹ 60.00




Year of Publication: 2017
Published by: ಅದಿತಿ ಪ್ರಕಾಶನ
Address: ಲಿಂಗಸುಗೂರು ಜಿ: ರಾಯಚೂರು

Synopsys

‘ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ’ ಶಿವಕವಿ ಶಿವಣ್ಣ ಹುಲ್ಲೂರ ಅವರ ತತ್ವಪದಗಳನ್ನು ಡಾ. ಸಿ.ಬಿ. ಚಿಲ್ಕರಾಗಿ ಅವರು ಸಂಪಾದಿಸಿದ್ದಾರೆ. ಕಲ್ಯಾಣ ಕರ್ನಾಟಕವೆಂದರೆ ವೈಚಾರಿಕತೆಯ ಗೋಳವನ್ನು ನಿರ್ಮಿಸಿದ ತತ್ವಪದ ಪರಂಪರೆಯ ನೆಲ. ಕರ್ನಾಟಕದಲ್ಲಿ ಪರ್ಯಾಯ ಸಾಹಿತ್ಯ ಆಧ್ಯಾತ್ಮ ದಾರ್ಶನಿಕತೆಯನ್ನು ಕಿರುದಾರಿಗಳಲ್ಲಿ ತತ್ವಪದಕಾರರು ಶೋಧಿಸಿದ್ದಾರೆ. ಅಲ್ಲದೆ ನೆಲಮೂಲ ಸಂಸ್ಕೃತಿ ಚಹರೆಯನ್ನು ಅವೈದಿಕ ನೆಲಯಲ್ಲಿ ರೂಪಿಸಿದ್ದಾರೆ. ಇಂದಿಗೂ ಹೊಸಕಾಲದ ನೆಲದ ಆರ್ದ್ರತೆಯನ್ನು ಕವಿತೆಯಲ್ಲದ ರೂಪದಲ್ಲಿ ಹಿಡಿದಿಡುತ್ತಿರುವುದು ವಿಶೇಷ. ಕಾಲುದಾರಿಯಲ್ಲಿ ಅನುಭಾವಿಕ ಪರಮಾರ್ಥವನ್ನು ಈ ಕಾಲದಲ್ಲಿ ಸಶಕ್ತವಾಗಿ ನೆಯ್ದು ಕೊಡುತ್ತಿರುವ ಶಿವಕವಿ ಶಿವಣ್ಣ ಹುಲ್ಲೂರು ಅವರು ತಮ್ಮದೇ ಪರಿಭಾಷೆಯಲ್ಲಿ ಬರೆದಿದ್ದಾರೆ. ನಾಟಕ, ಕಾವ್ಯ, ಜೀವನ ಚರಿತ್ರೆಗಳ ಮೂಲಕ ಮತ್ತು ತಮ್ಮ ಹಾಡುಗಳನ್ನು ಕೇಳುಗರು ಕ್ಯಾಸೆಟ್ ಗಳನ್ನು ಮಾಡಿಸಿ ಕೊಂಡಿದ್ದಾರೆ. ನಡೆ ನುಡಿಯಲ್ಲಿ ಒಂದಾಗುವ ಮಾರ್ಗ ಕಂಡುಕೊಳ್ಳುವ ತತ್ವಪದಕಾರರ ಸಾಧನಾ ಕೂಟಗಳಲ್ಲಿ ಮುಖಾಮುಖಿಯಾಗುವ ಇವರು ಆಧ್ಯಾತ್ಮ ಸಾಧಕರಾಗಿಯೂ ಹೆಸರು ಗಳಿಸಿದ್ದಾರೆ.

 

About the Author

ಸಿ. ಬಿ. ಚಿಲ್ಕರಾಗಿ

ಡಾ. ಸಿ.ಬಿ. ಚಿಲ್ಕರಾಗಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲ್ಕರಾಗಿ ಗ್ರಾಮದವರು. ಚಿಲ್ಕರಾಗಿ, ಗುಡಿಹಾಳ, ಮಸ್ಕಿ ಮತ್ತು ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ ಪ್ರೌಢ ಶಿಕ್ಷಣ ಹಾಗೂ ಕಾಲೇಜು, ಪದವಿ ಶಿಕ್ಷಣ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಸದ್ಯಕ್ಕೆ,  ಕೊಪ್ಪಳ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ.  ಕೃತಿಗಳು:ತಿಳಿವಳಿಕೆ ಬಯಲು, ನೂರೆಂಟು ನಾಯಿ ಬೊಗಳಿದರೇನು, ಪಣತಿ ಮತ್ತು ಮಹಾನವಮಿ, ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ ಹಾಗೂ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎನ್ನುವ ಕೃತಿಗಳನ್ನುರಚಿಸಿದ್ದಾರೆ. ...

READ MORE

Related Books