ಏನಾಯ್ತು ಮಗಳೇ

Author : ರವಿ ಬೆಳಗೆರೆ

Pages 104

₹ 100.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ದೇಶದಲ್ಲಿ ಸಂಚಲನವನ್ನು ಉಂಟು ಮಾಡಿದ್ದ ಹತ್ಯೆ ಎಂದರೆ ಅದು ಆರುಷಿ ತಲ್ವಾರ್ ಕೊಲೆ. 9 ವರ್ಷಗಳ ವಿಚಾರಣೆಯ ನಂತರ ಈ ಪ್ರಕರಣಕ್ಕೆ ಕೋರ್ಟ್ ತೀರ್ಪು ನೀಡಿತು. 12 ಅಕ್ಟೋಬರ್ 2017ರಂದು ಕೋರ್ಟ್ ನೀಡಿದ ತೀರ್ಪಿನಲ್ಲಿ ಪ್ರಬಲ ಸಾಕ್ಷ್ಯಾಧಾರಗಳ ಕೊರತೆ ಇದ್ದ ಕಾರಣ ಪ್ರಮುಖ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಈ ತೀರ್ಪು ಬರುವವರೆಗೂ, ಕೊಲೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಹಲವು ಬದಲಾವಣೆಗಳು ನಡೆದವು. ಸಿಬಿಐ ಈ ಕೇಸಿನ ತನಿಖೆ ನಡೆಸಿತು. ಸಿಬಿಐ ನಡೆಸಿದ ತನಿಖೆ, ಕೋರ್ಟ್‍ನಲ್ಲಿ ನಡೆದ ವಾದ ಪ್ರತಿವಾದ, ತಿರುಚಲಾದ ಸಾಕ್ಷ್ಯಾಧಾರಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಆರುಷಿ ತಲ್ವಾರ್ ಜೊತೆಗೆ ನಡೆದ ಇನ್ನೊಂದು ಕೊಲೆಯ ಕುರಿತ ವಿಚಾರಣೆಯಲ್ಲಿ ಆದಂತಹ ಎಡವಟ್ಟುಗಳ ಕುರಿತಾಗಿ ಕೂಡ ಿಲ್ಲಿ ವಿವರಿಸಲಾಗಿದೆ. ಕೊಲೆಗೆ ಕಾರಣವಾಗಬಲ್ಲ ಅಂಶಗಳು, ಕೊಲೆಗಾರರಲ್ಲಿ ಇರಬಹುದಾದಂತಹ ಮನಸ್ಥಿತಿ, ಕೊಲೆಯ ನಂತರ ಆದ ಘಟನೆಗಳ ಕುರಿತು ಸವಿವರವಾಗಿ ವಿಶ್ಲೇಷಣೆಯನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸಿಬಿಐ ನೀಡಿದ ವರದಿ, ಕೋರ್ಟ್‍ ತೀರ್ಪು ಹಾಗೂ ಇತರೆ ಮೂಲಗಳಿಂದ ವಸ್ತು ವಿಷಯವನ್ನು ಸಂಗ್ರಹಿಸಿ ಬರೆದಂತಹ ಪುಸ್ತಕ ಇದು.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books