ಈರೋಡ್ ರಾಮಸ್ವಾಮಿ ನಾಯ್ಕರ್

Author : ಆಗುಂಬೆ ಎಸ್. ನಟರಾಜ್‌

Pages 288

₹ 210.00




Year of Publication: 2019
Published by: ಆಗುಂಬೆ ಎಸ್. ನಟರಾಜ್
Address: #947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 9481423004

Synopsys

‘ಈರೋಡ್ ರಾಮಸ್ವಾಮಿ ನಾಯ್ಕರ್’ ಆಗುಂಬೆ ಎಸ್. ನಟರಾಜ್ ಅವರು ರಚಿಸಿ, ಪ್ರಕಟಿಸಿರುವ ಜೀವನ ಚರಿತ್ರೆ. ಈರೋಡ್ ರಾಮಸ್ವಾಮಿ ಅವರು ಕನ್ನಡಿಗರಾಗಿದ್ದು, ತಮಿಳುನಾಡಿನ ಈರೋಡ್ ನಲ್ಲಿ ಜನಿಸಿ, ತಮಿಳು ಭಾಷೆಯಲ್ಲಿಯೇ ಪಾಂಡಿತ್ಯ ಹೊಂದಿದ್ದಲ್ಲದೆ, ಸ್ವಾಭಿಮಾನಿ ಪಕ್ಷ ಕಟ್ಟಿ, ಅದು ಮುಂದೆ ದ್ರಾವಿಡ ಕಳಗಂ ಎಂಬ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಿದ ಕೀರ್ತಿ ಅವರದಾಗಿದೆ. ಜಾತಿಪದ್ಧತಿಯ ವಿರೋಧಿಯಾಗಿ ತಮ್ಮ ಜೀವಮಾನವಿಡೀ ದುಡಿದು ಖ್ಯಾತಿಗಳಿಸಿದ ರಾಮಸ್ವಾಮಿ ನಾಯ್ಕರ್ ರ ವರ್ಣರಂಜಿತ, ಅಭೂತಪೂರ್ವ, ಆಕರ್ಷಕ ವ್ಯಕ್ತಿತ್ವವುಳ್ಳ ಜೀವನಚರಿತ್ರೆಯನ್ನು ಲೇಖಕ ಆಗುಂಬೆ ನಟರಾಜ್ ಅವರು ಅರ್ಥಪೂರ್ಣವಾಗಿ ರಚಿಸಿದ್ದಾರೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books