ಗಡಿ ನೆಲದ ನಿಧಾನ

Author : ಗುರುಲಿಂಗಪ್ಪ ಧಬಾಲೆ

Pages 212

₹ 170.00




Year of Publication: 2020
Published by: ಬಸವ ಪ್ರಕಾಶನ ಹಾಗೂ ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್ , ಕಲಬುರಗಿ-585101

Synopsys

ಲೇಖಕ ಡಾ. ಗುರುಲಿಂಗಪ್ಪ ಧಬಾಲೆ ಅವರ ಸಂಶೋಧನಾತ್ಮಕ ಬರಹಗಳ ಸಂಗ್ರಹ ಕೃತಿ-ಗಡಿ ನೆಲದ ನಿಧಾನ. ಆಗಾಗ ಲೇಖಕರು ಬರೆದ ಒಟ್ಟು 16 ಲೇಖನಗಳಿದ್ದು, ಅಷ್ಟ ವರ್ಣದ ಕಲ್ಪನೆಯ ಅನನ್ಯತೆ, ಅಂಬಿಗರ ಚೌಡಯ್ಯ ವಚನಗಳಲ್ಲಿ ಸಾಮಾಜಿಕ ವಿಡಂಬನೆ, ವಚನಸಾಹಿತ್ಯ ಯುವಜನತೆ ಮತ್ತು ಸಹನ -ಅ ಸಹನೆ ಲೇಖನಗಳಲ್ಲಿ ವಚನದ ಹಿರಿಮೆ-ಗರಿಮೆಗಳನ್ನು ಎತ್ತಿಹಿಡಿದು ವಿಶ್ಲೇಷಿಸಿದ್ದಾರೆ. ಕನ್ನಡದಲ್ಲಿ ವಚನ ದಾಸ ಪರಂಪರೆಯಂತೆ ತತ್ವಪದದ ಪರಂಪರೆಯು ಹರಿದು ಬಂದಿದ್ದು ಅಲ್ಲಿನ ಆಳ -ಅಗಲ ವೈಭವವನ್ನು ಒಂದು ಲೇಖನದಲ್ಲಿ ಸಶಕ್ತವಾಗಿ ವಿವರಿಸಿದ್ದಾರೆ. ಅಲಕ್ಷಿತ ಸಾಹಿತ್ಯ ಪರಂಪರೆಯ ಕಡೆಗೆ ಅವರು ಓದುಗರ ಗಮನ ಸೆಳೆದಿದ್ದಾರೆ.. ಕನ್ನಡ ನಾಡು,ನುಡಿ ಸಾಹಿತ್ಯ ಸಂಸ್ಕೃತಿಗಳ ಕುರಿತು ಹಾದು ಬಂದಿರುವ ಲೇಖನಗಳಲ್ಲಿ ಗುರಲಿಂಗಪ್ಪ ಧಬಾಲೆ ಅವರ ವಿವೇಕ ದೂರದೃಷ್ಟಿ ಸಮತೆ, ಮಮತೆ ಗುಣಗಳು ಬೆರೆತುಕೊಂಡಿರುವುದು ವಿಶೇಷ.

About the Author

ಗುರುಲಿಂಗಪ್ಪ ಧಬಾಲೆ
(02 April 1967)

ಲೇಖಕ ಡಾ. ಗುರುಲಿಂಗಪ್ಪ ಶಂಕರಪ್ಪ ಧಬಾಲೆ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ (ಜನನ: 02-04-1967) ತೊಗಲೂರು ಗ್ರಾಮದವರು. ಸದ್ಯ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯ ಸಿ.ಬಿ. ಖೇಡಗಿ ಬಸವೇಶ್ವರ ವಿಜ್ಞಾನ, ಆರ್.ವಿ. ವಾಣಿಜ್ಯ ಹಾಗೂ ಆರ್.ಜೆ. ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಅಂಬಿಗರ ಚೌಡಯ್ಯನ ವಚನಗಳು: ಒಂದು ಅಧ್ಯಯನ (1991) -ವಿಷಯವಾಗಿ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ, ಹಾಗೂ ಬೀದರ ಜಿಲ್ಲೆಯ ಅನುಭಾವಿ ಕವಿಗಳು ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಕೃತಿಗಳು: ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಬೀದರ ಜಿಲ್ಲೆಯ ತತ್ವಪದಕಾರರು, ...

READ MORE

Related Books