ಗಳಗನಾಥ ಸಮಗ್ರ ಸಾಹಿತ್ಯ (ಆರು ಸಂಪುಟಗಳು)

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 3326

₹ 2000.00




Year of Publication: 2014
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀಭವನ, ಸುಭಾಸ ರಸ್ತೆ, ಧಾರವಾಡ-1
Phone: 0836-2441822, 2441823 :98454 47002

Synopsys

ಮೊದಲ ಸಂಪುಟ

ಕನ್ನಡಿಗರಿಗೆ ಸಂಬಂಧಿಸಿದ ’ಮಾಧವ ಕರುಣಾ ವಿಲಾಸ' ಎಂಬ ಕಾದಂಬರಿ ಈ ಸಂಪುಟದಲ್ಲಿದೆ. ಗಳಗನಾಥರು ಈ ಕಾದಂಬರಿಯನ್ನು 1923ರಲ್ಲಿ ರಚಿಸಿದ್ದರು.

ಎರಡನೆಯ ಸಂಪುಟ

ಕನ್ನಡಿಗರ ಕರ್ಮಕಥೆ, ಕುಮುದಿನಿ, ದುರ್ಗದ ಬಿಚ್ಚುಗತ್ತಿ ಕಾದಂಬರಿಗಳನ್ನು ಸೇರಿಸಲಾಗಿದೆ. ಗಳಗನಾಥರು ಈ ಕಾದಂಬರಿಗಳನ್ನು  1916ರಿಂದ 1938ರ ಅವಧಿಯಲ್ಲಿ ರಚಿಸಿದ್ದರು.

ಮೂರನೆಯ ಸಂಪುಟ

ಈಶ್ವರೀ ಸೂತ್ರ, ಮರಾಠರ ಅಭ್ಯುದಯ, ಕಮಲಕುಮಾರಿ, ಛತ್ರಪತಿ ಇವು ಈ ಸಂಪುಟದಲ್ಲಿವೆ. ಈ ಸಂಪುಟದಲ್ಲಿರುವ ಕಾದಂಬರಿಗಳು 1913 ರಿಂದ 1919ರ ಅವಧಿಯಲ್ಲಿ ರಚಿಸಿದ್ದರು.

ನಾಲ್ಕನೆಯ ಸಂಪುಟ

ಗೃಹ ಕಲಹ, ಶಿವಪ್ರಭುವಿನ ಪುಣ್ಯ, ಸ್ವರಾಜ್ಯ ಸುಗಂಧ, ಕುರುಕ್ಷೇತ್ರ ಕಾದಂಬರಿಗಳು ಈ ಸಂಪುಟದಲ್ಲಿವೆ, ಗಳಗನಾಥರು ಈ ಕಾದಂಬರಿಗಳನ್ನು 1918ರಿಂದ 1938ರ ಅವಧಿಯಲ್ಲಿ ರಚಿಸಿದ್ದರು.

ಐದನೆಯ ಸಂಪುಟ

ಕ್ಷಾತ್ರತೇಜ , ತತ್ವಸಾರ ,ತಿಲೋತ್ತಮ , ಧಾರ್ಮಿಕ ತೇಜ , ರಾಣಾ ರಾಜಸಿಂಹ ಕಾದಂಬರಿಗಳನ್ನು ಗಳಗನಾಥರು 1914 ರಿಂದ 1928ರ ಅವಧಿಯಲ್ಲಿ ರಚಿಸಿದ್ದರು.

ಆರನೆಯ ಸಂಪುಟ

ಪ್ರಬುದ್ಧ ಪದ್ಮನಯನೆ , ರಾಣಿ ಮೃಣಾಲಿನಿ ,ವೈಭವ , ಧರ್ಮರಹಸ್ಯ , ಸಂಸಾರ ಸುಖ. ಈ ಕಾದಂಬರಿಗಳನ್ನು ಗಳಗನಾಥರು 1898 ರಿಂದ 1926ರ ಅವಧಿಯಲ್ಲಿ ರಚಿಸಿದ್ದರು.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books