ಗಳಗನಾಥ ಕಾದಂಬರಿ ಸಂಪುಟ: 4

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 660

₹ 100.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಗಳಗನಾಥರು ರಚಿಸಿದ ಗೃಹ ಕಲಹ, ಶಿವಪ್ರಭುವಿನ ಪುಣ್ಯ, ಸ್ವರಾಜ್ಯ ಸುಗಂಧ, ಕುರುಕ್ಷೇತ್ರ ಕಾದಂಬರಿಗಳು ಈ ಸಂಪುಟದಲ್ಲಿವೆ, ಗಳಗನಾಥರು ಈ ಕಾದಂಬರಿಗಳನ್ನು 1918ರಿಂದ 1938ರ ಅವಧಿಯಲ್ಲಿ ರಚಿಸಿದ್ದರು. ಈ ಸಂಪುಟವೂ ಸೇರಿದಂತೆ ಒಟ್ಟು ಆರು ಸಂಪುಟಗಳನ್ನು ಧಾರವಾಡದ ಮನೋಹರ ಗ್ರಂಥಮಾಲೆಯು ಮರುಮುದ್ರಣ ಮಾಡಿದೆ. 

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books