ಗಾಂಧಿ-ಮಹಾತ್ಮರಾದುದು-1

Author : ಜಿ.ಎನ್. ರಂಗನಾಥ ರಾವ್

Pages 384

₹ 290.00

Buy Now


Year of Publication: 2015
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011.
Phone: 0802244 3996

Synopsys

ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯ, ದಬ್ಬಾಳಿಕೆಗಳ ವಿರುದ್ದ ಅಲ್ಲಿನ ವಲಸಿಗರನ್ನು ಸಂಘಟಿಸಿದ ಕಥನವೇ ರಾಮಚಂದ್ರ ಗುಹಾ ಅವರ “ಗಾಂಧಿ ಬಿಫೋರ್ ಇಂಡಿಯಾ' ಕೃತಿ. ಕನ್ನಡದ ಹಿರಿಯ ಬರಹಗಾರ ಜಿ. ಎನ್. ರಂಗನಾಥ ರಾವ್ ಅವರು ಅದನ್ನು 'ಗಾಂಧಿ-ಮಹಾತ್ಮರಾದುದು' ಎಂಬ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಅನುವಾದ ಮಾಡಿದ್ದಾರೆ. ಮಹಾತ್ಮಗಾಂಧಿಯ ಆಫ್ರಿಕಾ ದಿನಗಳನ್ನು ಈ ಎರಡು ಬೃಹತ್ ಸಂಪುಟಗಳು ತೆರೆದಿಡುತ್ತವೆ. ಮಹಾತ್ಮ ಗಾಂಧೀಜಿಯ ಕುರಿತಂತೆ ಈಗಾಗಲೇ ಎರಡು ಕೃತಿಗಳನ್ನು ರಂಗನಾಥ ರಾವ್ ಕನ್ನಡಕ್ಕಿಳಿಸಿದ್ದಾರೆ. ಒಂದು ರಾಮಚಂದ್ರ ಗುಹಾ ಅವರ “ಬಾಪು ನಂತರದ ಭಾರತ', ಮತ್ತೊಂದು ರಾಜಮೋಹನ ಗಾಂಧಿಯವರ “ಮೋಹನದಾಸ-ಒಂದು ಸತ್ಯಕತೆ”. ರಂಗನಾಥ್ ರಾವ್ ಅವರ ಗಾಂಧಿಯಾತ್ರೆಯ ಮೂರನೆಯ ಕೊಡುಗೆ ಗುಹಾ ಅವರ ಕೃತಿಯ ಇನ್ನೊಂದು ಅನುವಾದ. ಮಹಾತ್ಮಗಾಂಧೀಜಿಯ ಹೋರಾಟಗಾರನನ್ನು ರೂಪಿಸಿದ್ದು ದಕ್ಷಿಣ ಆಫ್ರಿಕಾ. ಆದುದರಿಂದಲೇ ಗಾಂಧೀಜಿಯ ದ.ಆಫ್ರಿಕಾದ ಬದುಕು, ಹೋರಾಟಗಳನ್ನು ತಿಳಿದುಕೊಳ್ಳದೇ ನಾವು ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಈ ನಿಟ್ಟಿನಲ್ಲಿ ಗುಹಾ ಅವರ ಈ ಕೃತಿ, ಗಾಂಧಿಯ ವ್ಯಕ್ತಿತ್ವವನ್ನು ನಮ್ಮದಾಗಿಸಲು ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books