ಗಾಂಧೀಜಿಯವರ ಉಪವಾಸಗಳು ಮತ್ತು....

Author : ಜಿ.ಕೆ. ಗೋವಿಂದರಾವ್

Pages 88

₹ 72.00




Year of Publication: 2020
Published by: ಅಭಿರುಚಿ ಪ್ರಕಾಶನ
Address: # 386, 3ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಸರಸ್ವತಿಪುರ, ಮೈಸೂರು-09.

Synopsys

ಖ್ಯಾತ ವಿಮರ್ಶಕ, ಚಿಂತಕ ಡಾ. ಜಿ.ಕೆ. ಗೋವಿಂದರಾವ್ ಅವರ ಕೃತಿ-‘ಗಾಂಧೀಜಿಯವರ ಉಪವಾಸಗಳು ಮತ್ತು....’ ದೈನಂದಿನ ಜೀವನದಲ್ಲಿ ಉಪವಾಸ ಹಗೂ ಸತ್ಯಾಗ್ರಹ ಪರಿಕಲ್ಪನೆಗಳಿಗೆ ಗಾಂಧೀಜಿ ಅವರ ಚಿಂತನೆಗಳು ಇತರರಿಗೆ ಪ್ರೇರಣೆ ನೀಡಿವೆ. ಉಪವಾಸ ಮಾಡುವುದು ಗಾಂಧೀಜಿಯವರು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದರು. ಆದರೆ, ಬ್ರಿಟಿಷರ ವಿರುದ್ಧವೂ ಅಸ್ತ್ರವಾಗಿ ಬಳಸುತ್ತಿದ್ದರು. ಇಂತಹ ಗಾಂಧೀಜಿಯವರ ವರ್ತನೆ-ನಿಲುವುಗಳು ವಿಚಿತ್ರ ವರ್ತನೆ ಎಂಬಂತೆಯೂ ಕಾಣಿಸುತ್ತಿದ್ದವು.

ಚಿಂತಕ ಆರ್. ಸಂತೋಷ ನಾಯಕ್ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಗಾಂಧೀಜಿಯವರ ಬದುಕು-ಹೋರಾಟದ ಮಾರ್ಗದಲ್ಲಿ ಪ್ರಾರ್ಥನೆ, ಪಾಪ-ಪ್ರಾಯಶ್ಚಿತ, ಭಜನೆ, ಉಪವಾಸ, ಸತ್ಯಾಗ್ರಹ ಆತ್ಮ ಶುದ್ಧೀಕರಣ, ಬ್ರಹ್ಮಚರ್ಯ, ಅಹಿಂಸೆ ಇತ್ಯಾದಿ ಧಾರ್ಮಿಕ ಅಥವಾ ಅಧ್ಯಾತ್ಮಿಕ ಅಂಶಗಳು ಇಡೀ ವ್ಯಕ್ತಿತ್ವದ ಆಲೋಚನೆಗಳು, ಕ್ರಿಯೆಗಳ ಮತ್ತು ರಾಜಕೀಯ ನಿಲುವುಗಳ ಹಿನ್ನೆಲೆಯಲ್ಲಿ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸಿದ್ದವು. ಅವರು ಪ್ರಾರಂಭಿಸಿದ ಉಪವಾಸ ಸತ್ಯಾಗ್ರಹಗಳು ಇಂದಿಗೂ ಅಹಿಂಸಾ ಹೋರಾಟದ ಯಶಸ್ವಿ ಜನಪ್ರಿಯ ಮಾದರಿಯಾಗಿ ಪ್ರಚಲಿತದಲ್ಲಿದ್ದರೂ ಡಾ. ಅಂಬೇಡ್ಕರ ಅವರೊಂದಿಗಿನ ಐತಿಹಾಸಿಕ ಪೂನಾ ಒಪ್ಪಂದದ ಸಂದರ್ಭದಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಒತ್ತಡ ಹೇರಲು, ತಮ್ಮ ಅಭಿಪ್ರಾಯವನ್ನೇ ಎಲ್ಲರೂ ಒಪ್ಪುವಂತೆ ಮಾಡಲು, ಬಲವಂತದ ತಂತ್ರವಾಗಿ ಬಳಸಲು ಮುಂದಾದರು. ಆ ಮೂಲಕ ತಮ್ಮದೇ ಸತ್ಯಾಗ್ರಹ ಸಿದ್ಧಾಂತಗಳಿಗೆ ವಿರುದ್ಧವಾಗಿ ಉಪವಾಸವನ್ನೇ ಹಿಂಸೆಯಾಗಿ ಬಳಸಿಕೊಂಡರು ಎಂಬುದು ಗಾಂಧೀಜಿ ಮೇಲಿರುವ ಬಹುದೊಡ್ಡ ಆರೋಪ. ಗಾಂಧೀಜಿಯವರಿಗೆ ಬೇರೆ ಮಾರ್ಗಗಳಿರಲಿಲ್ಲವೆ? ಬಹುಸಂಖ್ಯಾತ ದಲಿತರ ವಿಮೋಚನೆಯನ್ನು ಏಕೆ ತಡೆದರು? ಹಿಂದೂ ಧರ್ಮ ಒಡೆದು ಹೋಳಾಗುವ ಭಯವೇಕೆ ಕಾಡಿತು? ಹಿಂದೂ ಧರ್ಮಕ್ಕಂಟಿದ ಜಾತಿ ಕಳಂಕವನ್ನು ಅಧ್ಯಾತ್ಮಿಕ ಹಾಗೂ ನೈತಿಕ ಮಾರ್ಗದಿಂದಲೇ ನಿವಾರಿಸಬಹುದು ಎಂದು ಅವರಿಗೆ ಅನ್ನಿಸಿತ್ತಾ?’ ಎಂಬ ಚಿಂತನೆಯನ್ನು ವ್ಯಕ್ತಮಾಡಿದ್ದಾರೆ. ಗಾಂಧೀಜಿಯ ಬದುಕಿನ ಇಂತಹ ವೈಚಾರಿಕ ವೈರುಧ್ಯಗಳನ್ನು ವಿಶ್ಲೇಷಿಸಿದ ವಿಶಿಷ್ಟ ಕೃತಿ ಇದು.

About the Author

ಜಿ.ಕೆ. ಗೋವಿಂದರಾವ್
(27 April 1937 - 15 October 2021)

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...

READ MORE

Reviews

https://avadhimag.in/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa-%e0%b2%86%e0%b2%b0%e0%b3%8d-%e0%b2%8e%e0%b2%a8%e0%b3%8d-%e0%b2%93%e0%b2%a6%e0%b2%bf%e0%b2%a6-%ca%bc%e0%b2%97%e0%b2%be%e0%b2%82%e0%b2%a7%e0%b3%80/

Related Books