ಗಂಗೆಯ ಶಿಖರಗಳಲ್ಲಿ

Author : ಜಿ.ಎಸ್. ಶಿವರುದ್ರಪ್ಪ

Pages 112

₹ 70.00

Buy Now


Year of Publication: 2012
Published by: ವಸಂತ ಪ್ರಕಾಶನ

Synopsys

ಖ್ಯಾತ ಕವಿ, ವಿಮರ್ಶಕ ಡಾ. ಜಿ. ಎಸ್. ಶಿವರುದ್ರಪ್ಪನವರು ಹಿಮಾಲಯದ ನಾಲ್ಕು ಧಾಮಗಳೆಂದು ಹೆಸರಾದ ಗಂಗೋತ್ರಿ, ಯಮುನೋತ್ರಿ, ಬದರೀ, ಕೇದಾರಗಳಿಗೆ ಹತ್ತು ದಿನಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದರು. ಆ ಪ್ರವಾಸದ ಒಂದ ಪುಟ್ಟ ಕಥನವೇ, 'ಗಂಗೆಯ ಶಿಖರಗಳಲ್ಲಿ’. ಪ್ರವಾಸ ಕಥನಕ್ಕೆ ಈ ಶೀರ್ಷಿಕೆ ಏಕೆ ಕೊಟ್ಟರು?! 'ಗಂಗೋತ್ರಿಯಂತೂ ಗಂಗೆಯ ಜನ್ಮಭೂಮಿ; ಕೇದಾರ, ಬದರಿಗಳು, ಶಿವ ಹಾಗೂ ವಿಷ್ಣುವಿನ ನೆನಪುಗಳಿಂದ ಪೌರಾಣಿಕವಾಗಿ ಗಂಗೆಯೊಂದಿಗೆ ಸಂಬಂಧಿಸಿರುವುದರ ಜೊತೆಗೆ ಅಲ್ಲಿಂದ ಉಗಮಿಸುವ ಮಂದಾಕಿನೀ ಅಲಕನಂದಾ ನದಿಗಳೂ ಗಂಗೆಯನ್ನು ಸೇರುತ್ತವೆ. ಯಮುನೆಯಂತೂ ಗಂಗೆಯನ್ನು ಪ್ರಯಾಗದಲ್ಲಿ ಸೇರುತ್ತದೆ. ಭಾರತದ ಶತಮಾನಗಳ ನಾಗರಿಕತೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ “ಗಂಗೆ”ಗೆ ಸಂಬಂಧಿಸಿದ ಈ ಪರ್ವತ ಶಿಖರಗಳ ನಡುವೆ ನಾನು ಕೈಕೊಂಡ ಈ ಪ್ರವಾಸಕ್ಕೆ ’ಗಂಗೆಯ ಶಿಖರಗಳಲ್ಲಿ’ ಎಂದು ಕರೆದಿದ್ದೇನೆ ಎನ್ನುವುದು ಲೇಖಕರ ಮಾತು.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books