ಗೆಲುವು ನನ್ನದೇ

Author : ಕಿರಣ್ ಪ್ರಸಾದ್ ರಾಜನಹಳ್ಳಿ

Pages 108

₹ 70.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

ನಾವು ನಿರ್ವಹಿಸುವ ಉದ್ಯೋಗ ಮನಸ್ಸಿಗೆ ಉಲ್ಲಾಸ ನೀಡಬೇಕು. ಆಗ ಜೀವನವೆಂಬುದು ಒಂದು ಸುಖ ಪ್ರಯಾಣವಾಗುತ್ತದೆ. ಇಲ್ಲವಾದರೆ, ಅದು ಯಾಂತ್ರಿಕ ಬದುಕಾಗಿ, ನೀರಸವೆನಿಸುತ್ತದೆ.

ನಮ್ಮ ಅಭಿರುಚಿಗೆ, ಅರ್ಹತೆಗೆ, ಅನುಕೂಲಕ್ಕೆ ತಕ್ಕಂತಹ ಉದ್ಯೋಗವನ್ನು ಆರಿಸಿಕೊಳ್ಳುವ ಕೌಶಲ್ಯದ ಬಗೆಯನ್ನು ಈ ಪುಸ್ತಕ ವಿವರಿಸುತ್ತದೆ. ಮನಸ್ಸಿಗೆ ಆಪ್ಯಾಯವಾಗುವಂತಹ ಉದ್ಯೋಗವನ್ನೇ ಅಪ್ಪಿಕೊಳ್ಳಬಹುದಾದಂತಹ ಅವಕಾಶಗಳನ್ನು, ವೈವಿಧ್ಯಮಯ ವೃತ್ತಿಕ್ಷೇತ್ರದ ಹಲವಾರು ಟಿಸಿಲುಗಳನ್ನು ಈ ಕೃತಿ ಪರಿಚಯಿಸುತ್ತದೆ.

ಕಿರಣ್ ಪ್ರಸಾದ್ ರಾಜನಹಳ್ಳಿ ಅವರು ಬರೆದ ಲೇಖನಗಳನ್ನು ಡಾ. ಸಿ.ಆರ್. ಚಂದ್ರಶೇಖರ ಸಂಪಾದಿಸಿದ್ದಾರೆ.

About the Author

ಕಿರಣ್ ಪ್ರಸಾದ್ ರಾಜನಹಳ್ಳಿ
(20 June 1966)

ಕಾದಂಬರಿಗಾರ್ತಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರು 1966 ಜೂನ್‌ 20 ರಂದು ಚಿತ್ರದುರ್ಗದಲ್ಲಿ ಜನಿಸಿದರು. ’ನೀ ನಡೆವ ಹಾದಿಯಲ್ಲಿ’ (ಕಾದಂಬರಿ), ಮಕ್ಕಳ ಕಥಾಲೋಕ, ನಕ್ಷತ್ರಲೋಕದಲ್ಲಿ ನಚಿಕೇತ (ಶಿಶುಸಾಹಿತ್ಯ), ಹಿಮಕಿನ್ನರಿ, ಸರಿಸೃಪಗಳ ಜೀವನಚರಿತ್ರೆ, ಸೂರ್ಯ ಅಪಾರ್ಟ್‌ಮೆಂಟ್ (ಮಕ್ಕಳ ಪತ್ತೆದಾರಿ ಕಾದಂಬರಿ), ಅಮೆರಿಕಾದಲ್ಲಿ ಅಧ್ಯಯನದ ಅನುಭವ (ಪ್ರವಾಸಕಥನ), ಶಿಶುಪ್ರಾಸಗಳು, ಒಂಟಿ ನಕ್ಷತ್ರದ ನಾಡಿನಲ್ಲಿ, ಅಮ್ಮ ಏಕೆ ನಗಲಿಲ್ಲ (ಲೇಖನ ಸಂಗ್ರಹ). ಲೇಖಕರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books