ಗೆಲುವು ನಿಮ್ಮದಾಗಬೇಕೆ?

Author : ವಿನಾಯಕ ಕೊಡ್ಸಾರ

Pages 120

₹ 100.00




Year of Publication: 2018
Published by: ಮಿಥಿಲಾ ಪ್ರಕಾಶನ
Address: ೨ನೇಬ್ಲಾಕ್ ರಾಜಾಜಿನಗರ ಬೆಂಗಳೂರು

Synopsys

’ಗೆಲುವು ನಿಮ್ಮದಾಗಬೇಕೆ?’ ವಿನಾಯಕ ಕೊಡ್ಸಾರ ಹಾಗು ಸುಷ್ಮಾ ಚಕ್ರೆ ಯವರು ಬರೆದಿರುವ ಬದುಕು ಬದಲಿಸಿದವರ ನೈಜ ಕಥೆಗಳ ಸಂಗ್ರಹ.

ಬದುಕಿಗೆ ಮಿತಿಯೆ ಇಲ್ಲದಂತೆ ಬದುಕಿದ ನಿಕೋಲಸ್ ಜೇಮ್ಸ್ ವೂಯಿಚಿಚ್‌ ಅವರಿಗೆ ಹುಟ್ಟುತ್ತಲೆ ಕೈಗಳಿಲ್ಲ ಹಾಗೆ ಬಳಕೆಗೆ ಯೋಗ್ಯವಲ್ಲದ ಪುಟ್ಟ  ಪಾದಗಳು.ಅಮ್ಮನ ಆಸರೆ ಬಿಟ್ಟು ಬದುಕಲಾರದ ಅಸಹನೀಯ ಸ್ಥಿತಿಯಲ್ಲಿ ಪದವಿ ಪಡೆದು ದೇಶಗಳ ಸುತ್ತುತ್ತಾನೆ. ಪುಸ್ತಕ ಬರೆಯುತ್ತಾನೆ, ಭಾಷಣಗಳ ಮಾಡುತ್ತಾ ಟೆಲಿಚಿತ್ರಗಳ ಮಾಡುತ್ತ, ಬಹುಮಾನ ಗಳಿಸುತ್ತ ಲಕ್ಷಾಂತರ ಅಂಗವಿಕಲರಿಗೂ ಬದುಕು ಬದುಕಲಿರುವಂತಹದು ಎಂದು ತೋರಿಸಿಕೊಡುತ್ತಾನೆ.

ಅರುಣಿಮಾ ಪೋಲೀಸ್ ಆಗುವ ಕನಸ ಹೊತ್ತು ಹುಟ್ಟಿದವಳು. ಆದರೆ ಅದೊಂದು ದಿನ ರೈಲಿನಲ್ಲಿ ಕಳ್ಳರ ದಾಳಿಯಿಂದ ರೈಲಿಂದ ಕೆಳಗೆ ನೂಕಲ್ಪಟ್ಟ ಅವಳ ಕಾಲ್ಗಳು ಇನ್ನಿಲ್ಲವಾಗುತ್ತವೆ. ದಯನೀಯ ದಾರುಣ ಸ್ಥಿತಿ ಅವಳದು. ಆದರೆ ಅವಳ ಛಲ ಹಿಮಾಲಯ ಏರುವಂತೆ ಮಾಡಿತು. ಹಿಮಾಲಯ ಏರಿದ ಮೊದಲ ಅಂಗವಿಕಲೆಯಾಗಿಬಿಟ್ಟಳು.

ನಮ್ಮ ಸುತ್ತಲೇ ಬದುಕಿರುವ ದುರ್ಬರ ಸ್ಥಿತಿಯಲ್ಲೂ ಜೀವನ ಸಾಧನೆ ಮಾಡಿದ ಇಂತಹ ಇಪ್ಪತ್ತು ಸ್ಫೂರ್ತಿದಾಯಕ ಚೇತನಗಳನ್ನು ಕೃತಿ ಪರಿಚಯಿಸುತ್ತದೆ. 

About the Author

ವಿನಾಯಕ ಕೊಡ್ಸಾರ
(28 January 1987)

ಸಿನೆಮಾ-ಕಿರುತೆರೆ ಸಾಹಿತ್ಯದಲ್ಲಿ ತೊಡಗಿರುವ ವಿನಾಯಕ‌ ಕೋಡ್ಸರ ಅವರು ಸಾಗರದ ಸಮೀಪ ಕೋಡ್ಸರದವರು. 1987 ಜನವರಿ 28ರಂದು ಜನನ. ವೃತ್ತಿಯಿಂದ ಪತ್ರಕರ್ತರು. ಧಾರವಾಹಿಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ಧಾರೆ. ‘ಅಕ್ಷರ ವಿಹಾರ’-ಲಘು ಲೇಖನಗಳ ಸಂಕಲನ.  ಪತ್ರಿಕೆಗೆ ಬರೆಯೋದು ಹೇಗೆ?, ನೀವೂ ಪತ್ರಕರ್ತರಾಗಬೇಕೆ?- ಸಂಪಾದಿತ ಕೃತಿಯಾಗಿದ್ದು ‘ಮೂಗಿಮನೆ’ ಅವರ ಮೊದಲ ಕಥಾ ಸಂಕಲನ. ‘ಗೆಲುವು ನಿಮ್ಮದಾಗಬೇಕೆ?’ ಎಂಬ ಸ್ಫೂರ್ತಿದಾಯಕ ಕಥೆಗಳನ್ನು ರಚಿಸಿದ್ದು 2 ಕಿರುಚಿತ್ರಗಳಿಗೆ ಮತ್ತು ಅನೇಕ‌ ಡಾಕ್ಯುಮೆಂಟರಿಗಳಿಗೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಸಿನಿಮಾ ನಿರ್ದೇಶನದಲ್ಲಿ ತೊಡಗಿದ್ದಾರೆ.  ...

READ MORE

Related Books