ಘನದ ಕುರುಹು

Author : ನಾಗೇಶ್ ಜೆ. ನಾಯಕ

Pages 90

₹ 85.00




Year of Publication: 2019
Published by: ಎಸ್. ಎಲ್‌. ಎನ್‌ ಪಬ್ಲಿಕೇಶನ್‌
Address: ಬೆಂಗಳೂರು
Phone: 9900817716

Synopsys

ಹಿರಿಯ ಕವಿಗಳು, ಚಿಂತಕರು, ಗಣ್ಯರ ಕುರಿತು ಬರೆದ ಲೇಖನಗಳ ಸಂಗ್ರಹವೇ ’ಘನದ ಕುರುಹು’. ಲೇಖನಗಳು ಸರಳವಾಗಿದ್ದು ವ್ಯಕ್ತಿ ಚಿತ್ರಣಗಳಿಗೆ ಅಗತ್ಯವಾದ ಒಂದು ಶೈಲಿಯನ್ನು ಬಳಸಿದ್ದಾರೆ ನಾಗೇಶ ನಾಯಕರು.

ಚುಟುಕು ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನಿತ್ತ ಹಿರಿಯ ಕವಿ ಜಿನದತ್ತ ದೇಸಾಯಿ ಅವರ ಕುರಿತು ಬರೆಯುತ್ತ ’ನೆತ್ತಿಯಲ್ಲಿ ಅಮೃತ ಕಲಶ ಹೊತ್ತು ನಿಂತವರು’ ಎಂದು ಅಲಂಕಾರಿಕವಾಗಿ, ಅರ್ಥಪೂರ್ಣವಾಗಿ ಅವರ ಕಾವ್ಯದ ಸೊಗಸನ್ನು ಬಣ್ಣಿಸುತ್ತಾರೆ. ಸರಳ ಸಜ್ಜನಿಕೆಯ ಕವಿ ಡಾ. ವೈ. ಎಂ ಯಾಕೊಳ್ಳಿ ಸೇರಿದಂತೆ ಇತರೆ ಗಣ್ಯರ ಕಾವ್ಯ ಬದುಕಿನ ಸೂಕ್ಷ್ಮತೆಗಳನ್ನು ತೆರೆದಿಡುವ ಲೇಖನಗಳು ಇಲ್ಲಿವೆ.

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books