ಗಿರೀಶ್‌ ಕಾಸರವಳ್ಳಿ

Author : ಶರತ್‍ ಕಲ್ಕೋಡ್

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 2015 ನೇ ಪುಸ್ತಕ ಗಿರೀಶ್ ಕಾಸರವಳ್ಳಿ. ಪ್ರಸಿದ್ದ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕರಾಗಿರುವ ಕನ್ನಡಿಗ ಗಿರೀಶ್ ಕಾಸರವಳ್ಳಿಯವರ ಹದಿನಾಲ್ಕು ಚಿತ್ರಗಳು ಇದುವರೆಗೆ ಇಪ್ಪತ್ತೈದು ರಾಷ್ಟ್ರೀಯ ಪ್ರಶಸ್ತಿ, ನಲವತ್ತೈದು ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ಇಪ್ಪತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಗಳ ಹಿರಿಮೆಗೆ ಭಾಜನವಾಗಿವೆ. ಕಳೆದ ನಾಲ್ಕು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಗಿರೀಶ್ ಕಾಸರವಳ್ಳಿ ಕನ್ನಡ ಚಿತ್ರರಂಗದ ಕಲಾತ್ಮಕ ಚಿತ್ರಗಳ ಹರಿಕಾರ'. ಭಾರತ ಚಿತ್ರರಂಗದ ಪ್ರಥಮ ಶತಮಾನದ ಅತ್ಯುತ್ತಮ ಚಿತ್ರಗಳೆಂದು ಸಿನಿಮಾ ವಿಮರ್ಶಕರೂ, ಚಿತ್ರಪ್ರೇಮಿಗಳೂ ಆಯ್ಕೆ ಮಾಡಿದ ಇಪ್ಪತ್ತು ಚಿತ್ರಗಳಲ್ಲಿ ಗಿರೀಶರ 'ಘಟಶ್ರಾದ್ಧ'ವೂ ಒಂದು. ಕಾಸರವಳ್ಳಿಯವರ ಜೀವನ-ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

About the Author

ಶರತ್‍ ಕಲ್ಕೋಡ್

ಶರತ್ ಕಲ್ಕೋಡ್ (1946) ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮಗಳೆರಡರಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿರುವವರು, ಮೂಲತಃ ಮಲೆನಾಡಿನವರು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದವರು. 1981ರಲ್ಲಿ ಮಂಗಳೂರಿನ 'ಸಂತೋಷ' ಮಾಸಪತ್ರಿಕೆಯ ಸಂಪಾದಕ ಮಂಡಳಿಗೆ ಸೇರಿ, ಪತ್ರಿಕಾ ಜೀವನವನ್ನು ಆರಂಭಿಸಿದ ಶರತ್ ಕಲ್ಕೋಡ್, ಮುಂದೆ ಮಣಿಪಾಲದ 'ತರಂಗ' ಪತ್ರಿಕೆಯಲ್ಲಿ 9 ವರ್ಷ, ಬೆಂಗಳೂರಿನ 'ಸುಧಾ' - 'ಮಯೂರ' ಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಸುಮಾರು ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಂತರವೂ, “ಉಷಾಕಿರಣ', 'ಓ ಮನಸೇ' ಪತ್ರಿಕೆಗಳಲ್ಲಿ ಕೆಲವು ವರ್ಷ ಕಾರ್ಯನಿರ್ವಹಿಸಿ, ಈಗ ಬರವಣಿಗೆ ಹಾಗೂ ಕೃಷಿಯನ್ನೇ ...

READ MORE

Related Books