ಗಿರಿಯ ಸಿರಿ

Author : ಚಂದ್ರಕಾಂತ ಕರದಳ್ಳಿ

Pages 60




Published by: ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
Address: ಯಾದಗಿರಿ

Synopsys

ನೆರೆದ ಜನ ಹರಿದು ಹೋಗುವಂತೆ ಸಮ್ಮೇಳನ ಎರಡು ಮೂರು ದಿನಗಳ ಕಾಲ ವಿಜೃಂಭಿಸಿ ಜನ ಮಾನಸದಲ್ಲಿ ತನ್ನ ಮುದ್ರೆಯನ್ನು ಒತ್ತಿ ಮರೆಯಾಗುತ್ತದೆ. ನಂತರ ಸಮ್ಮೇಳನ ಯವಾಗ ನಡೆಯಿತು, ಎಲ್ಲಿ ನಡೆಯಿತು, ಎಂಬ ಸಂಗತಿಗಳ ಜೊತೆಗೆ ರಾಜ್ಯ ಹಾಗೂ ಜಿಲ್ಲೆಯ ಮಾಹಿತಿಗಳು ಹಾಗೂ ಕನ್ನಡದ ಸಂಗತಿಗಳು ದಾಖಲೆಯಾಗಲಿ ಎಂಬ ದೃಷ್ಟಿಯಿಂದ ಸ್ಮರಣ ಗ್ರಂಥ ರೂಪುಗೊಳ್ಳುತ್ತದೆ. ಅಂಥ ಸ್ಮರಣ ಗ್ರಂಥ 'ಗಿರಿಯ ಸಿರಿ' ಯಾದಗಿರಿ ಜಿಲ್ಲೆಯ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 24-25 ಡಿಸೆಂಬರ್ 2018ರಂದು ನೆರವೇರಿದ ಸವಿನೆನಪಿಗಾಗಿ ಹೊರ ತಂದ ಗ್ರಂಥವಿದು. 

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books