ಜ್ಞಾನಸಿರಿ

Author : ಶರಣಬಸಪ್ಪ ವಡ್ಡನಕೇರಿ

Pages 100

₹ 80.00




Year of Publication: 2016
Published by: ಅಭಿಷೇಕ ಪ್ರಕಾಶನ
Address: # 184/1A, ಸುಭಾಷ್ ಚೌಕ್, ಎಸ್.ಬಿ. ಆರ್. ರಸ್ತೆ, ಕಲಬುರಗಿ-585103
Phone: 9686153485

Synopsys

ಲೇಖಕರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಡಾ. ನಾಗಪ್ಪ ಟಿ. ಗೋಗಿ ಹಾಗೂ ಅವರು ಜಂಟಿಯಾಗಿ ಸಂಪಾದಿಸಿದ ಲೇಖನಗಳ ಸಂಗ್ರಹ ಕೃತಿ-ಜ್ಞಾನ ಸಿರಿ. ಜ್ಞಾನಸಿರಿ ವೈವಿಧ್ಯಮಯ ವಿಷಯಗಳ ಮಹತ್ವದ ಸಾಹಿತ್ಯ ಕೃತಿ.ಇಲ್ಲಿ ಶಿಷ್ಟ ಮತ್ತು ಜನಪದ ಸ್ಥಳನಾಮ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು ಸಂಚಯ ಗೊಂಡಿವೆ. ಭೂತ,ವರ್ತಮಾನ ಹಾಗೂ ಭವಿಷ್ಯತ್ತಿನ ಸಾಹಿತಿಕ ಕಾಳಜಿಗಳುಇಲ್ಲಿ ವ್ಯಕ್ತವಾಗಿವೆ. ಹಳೆಗನ್ನಡದ ಅಧ್ಯಯನದ ಅವಶ್ಯಕತೆಯಿಂದ ಹಿಡಿದು ಸಾವಯವ ಕೃಷಿ ಅವಲಂಬನೆ ಹಾಗೂ ಮನೆವಾರ್ತೆಯ ಕಡೆಗೂ ಲೇಖಕರ ಗಮನ ಹರಿದಿದೆ. ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯಕ್ಕೆ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವ,ಸಂಬಂಧಗಳ ಸೂಕ್ಷ್ಮತೆಯನ್ನು ಗಮನಕ್ಕೆ ತರುವ ಭಾರತೀಯ ಸಂಪ್ರದಾಯ ರೀತಿ-ರಿವಾಜುಗಳನ್ನು ಹಾಗೂ ನಡಾವಳಿಕೆಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಅಗತ್ಯತೆ ಇದೆ.

ಕನ್ನಡ ಬಹಿರಂಗ ಭೂಮಿಯ ವೈಶಿಷ್ಟತೆ,ಜಾನಪದ ಹಿನ್ನೆಲೆಯಲ್ಲಿ ನಂಬಿಕೆ ಮತ್ತು ಆಚರಣೆ,ಶರಣ ಸಾಹಿತ್ಯ ಮತ್ತು ಜಾತಿ ಪದ್ಧತಿ, ಪಾರಂಪರಿಕ ಮತ್ತು ಆಧುನಿಕ ಕೃಷಿಯ ವೈರುದ್ಧ್ಯಗಳು, ಸೀತೆಯ ಪುಣ್ಯಪ್ರಾಯೋಗಿಕ ವಿಮರ್ಶೆ, ಹಳಗನ್ನಡ ಸಾಹಿತ್ಯ ಬೋಧನೆ ಎಂದು ಎಷ್ಟು ಪ್ರಸ್ತುತ,ಹೀಗೆ ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಒಳಗೊಂಡಿದೆ.

 ಸಾಹಿತಿ ಡಾ. ಎಸ್. ಶಾರದಾದೇವಿ ಜಾಧವ ಅವರು ಕೃತಿಗೆ ಬೆನ್ನುಡಿ ಬರೆದು ‘ಸಂಶೋಧನಾತ್ಮಕ ಬರಹಗಳು ವಸ್ತು ವೈವಿಧ್ಯತೆಯಿಂದ ಕೂಡಿವೆ. ಆಳವಾದ ಚಿಂತನಗೆ ಹಚ್ಚುತ್ತವೆ. ಓದಿನ ವಿಸ್ತಾರವನ್ನು ಹೆಚ್ಚಿಸುತ್ತವೆ. ಸಂಶೋಧನೆ ಅಧ್ಯಯನಕ್ಕೆ ಪ್ರೇರಣೆ ನೀಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books