ಜ್ಞಾನದ ಬಲ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 84

₹ 50.00




Year of Publication: 2011
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರ ಸಾಮಾಜಿಕ ನಾಟಕ-ಜ್ಞಾನದ ಬಲ. ನಾಟಕದಲ್ಲಿ ಬಗೆಹರಿಸಲಾಗದ ಸಮಸ್ಯೆಗಳು ಪ್ರಸ್ತಾಪವಾಗುತ್ತವೆ. ನಿರಾಶಾವಾದ ಪ್ರತಿಪಾದಿಸುವುದಿಲ್ಲ.ಬಡತನ, ಅನಕ್ಷರತೆ,ಜೂಜಿನಂತಹ ಸಾಮಾಜಿಕ ಪಿಡುಗುಗಳ ಪ್ರಸ್ತಾಪವಿದೆ. ಬದುಕಿನಲ್ಲಿ ಸಾಧ್ಯವಾಗುವ ಸಂಗತಿಯೇ ಈ ನಾಟಕದ ವಸ್ತು. ಮೂರು ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಹೆಣಗುತ್ತವೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎನ್ನುವ ಅಲ್ಲಮನ ವಚನದ ಸಾಲುಗಳನ್ನು ಪುಷ್ಟೀಕರಿಸುವ ರೀತಿಯಲ್ಲಿ ಹಿನ್ನೆಲೆಯ ಸಮಸ್ಯೆಗಳಿಗೆ ಪರಿಹಾರ ಸೂಚಿತವಾಗಿದೆ. ಆದರೆ, ಕಷ್ಟಪಟ್ಟು ದುಡಿದರೆ ವಿವೇಕದಿಂದ ಬದುಕು ನಡೆಸಿದರೆ ಹಾಗೂ ಎಷ್ಟೇ ಕಷ್ಟ ಬಂದರೂ ಒಳ್ಳೆಯತನ ಉಳಿಸಿಕೊಳ್ಳುವವರು ಅಂತಿಮವಾಗಿ ಜಯಶಾಲಿ ಯಾಗುತ್ತಾನೆ. ಎನ್ನುವುದು ನಾಟಕದ ಒಟ್ಟು ಸಾರವಾಗಿದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books