ಗೋಕಾಕರ ಸಾಹಿತ್ಯದ ಮೇಲೆ ಶ್ರೀ ಅರವಿಂದರ ಪ್ರಭಾವ

Author : ಜೀವಿ (ಜಿ.ವಿ. ಕುಲಕರ್ಣಿ)

Pages 74

₹ 100.00




Year of Publication: 2019
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018

Synopsys

ಮುಂಬೈ ಕನ್ನಡಿಗರಾದ ಲೇಖಕ ಡಾ.ಜಿ.ವಿ ಕುಲಕರ್ಣಿ ಅವರ ಪ್ರಬಂಧ ಕೃತಿ.  ಕುಲಕರ್ಣಿ ಅವರ ‘ಗೋಕಾಕರ ಸಾಹಿತ್ಯದ ಮೇಲೆ ಶ್ರೀ ಅರವಿಂದರ ಪ್ರಭಾವ’ ಮಹಾಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿ ನೀಡಿತ್ತು. ಇಂಗ್ಲಿಷಿನಲ್ಲಿ ಸಲ್ಲಿಸಿದ್ದ ಈ ಮಹಾಪ್ರಬಂಧವು 23 ವರ್ಷಗಳ ನಂತರ ಕನ್ನಡಕ್ಕೆ ಅನುವಾದಗೊಂಡಿದೆ. ಇದರಲ್ಲಿ ಒಂಬತ್ತು ಅಧ್ಯಾಯಗಳಿವೆ.  ಸಾಹಿತ್ಯದಲ್ಲಿ ತೌಲನಿಕ ಅಧ್ಯಯನಕ್ಕೆ ಮಹತ್ವದ ಸ್ಥಾನವಿದೆ. ಮೇರು ಸಾಹಿತಿಗಳ ಕಾವ್ಯ ಕೃಷಿಯನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ, ವಿಮರ್ಶಾತ್ಮಕ ಬರಹ ಸೃಜಿಸುವುದು ಸವಾಲಿನ ಕೆಲಸವೇ ಸರಿ. ಗೋಕಾಕರು ಮತ್ತು ಅರವಿಂದ ಇಬ್ಬರೂ ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ ಮಹಾನ್‌ ಸಾಹಿತಿಗಳು. ಇಬ್ಬರ ಆಯ್ದ ಕವನಗಳನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ, ಕಾವ್ಯಪ್ರಿಯರಿಗೆ ಸತ್ವಯುತವಾಗಿ ತಿಳಿಸಿಕೊಡುವಲ್ಲಿ ಲೇಖಕರು ವಹಿಸಿರುವ ಮುತುವರ್ಜಿ ಹಾಗೂ ಶ್ರಮ ಈ ಕೃತಿಯಲ್ಲಿ ಎದ್ದುಕಾಣಿಸುತ್ತದೆ. 

About the Author

ಜೀವಿ (ಜಿ.ವಿ. ಕುಲಕರ್ಣಿ)
(10 June 1937)

  ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...

READ MORE

Related Books