ಗೋರಿಲ್ಲಾ ನಾಮಕರಣ ಪ್ರಸಂಗ

Author : ವಿಶ್ವೇಶ್ವರ ಭಟ್

Pages 176

₹ 125.00




Year of Publication: 2015
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಪತ್ರಕರ್ತ-ಅಂಕಣಕಾರ ವಿಶ್ವೇಶ್ವರ ಭಟ್ ಅವರು ರವಾಂಡಾ ಪ್ರವಾಸದ ಟಿಪ್ಪಣಿಗಳನ್ನು ಬರೆದ ಕೃತಿ-ಗೋರಿಲ್ಲಾ ನಾಮಕರಣ ಪ್ರಸಂಗ. ಆಫ್ರಿಕಾ ಖಂಡದ ಉಗಾಂಡ ದೇಶದ ರವಾಂಡಾ ಇದೆ. ಈ ಕಾಡಿನಲ್ಲಿ 2010ರಲ್ಲಿಯ ಲೆಕ್ಕಾಚಾರದಂತೆ ಸುಮಾರು 880 ಕ್ಪ್ಲಕೂ ಆಚೀಚೆ ಗೋರಿಲ್ಸ್ಲಾಗಳಿದ್ದು, ಈ ತಳಿಯ ಗೋರಿಲ್ಲಾಗಳು ಈ ಭೂಪ್ರದೇಶದಲ್ಲಿ ಮಾತ್ರ ಕಾಣ ಸಿಗುತ್ತವೆ.  ಆದ್ದರಿಂದ, ರವಾಂಡಾ ಸರ್ಕಾರ, ಪ್ರತೀ ವರ್ಷ, ವಿಶ್ವದ ವಿವಿದೆಡೆಯ ಶ್ರೇಷ್ಟ ವ್ಯಕ್ತಿಗಳನ್ನು ಆಮಂತ್ರಿಸಿ ‘ಕ್ವಿತಾ ಇಝೀನಾ ಎಂಬ ಹಬ್ಬ ಆಚರಿಸುತ್ತದೆ. ಅಂದರೆ, ಗೋರಿಲ್ಲಾ ನಾಮಕರಣದ ಹಬ್ಬ ಅದು. ವಿನಾಶದ ಅಂಚಿನಲ್ಲಿರುವ ಗೋರಿಲ್ಲಾ ತಳಿಯ ಮರಿಗಳ ಸಮೀಕ್ಷೆ ನಡೆಸಿ, ನಾಮಕರಣ ಮಾಡಲಾಗುತ್ತದೆ. ಇದು ಪ್ರಾಣಿ ಸಂರಕ್ಷಣೆಯ ಭಾಗವಾಗಿ ಹಬ್ಬ ಆಚರಿಸುತ್ತಿದ್ದು, ಈ ಕುರಿತು ಈ ಕೃತಿಯಲ್ಲಿ ವಿವರಗಳಿವೆ.  

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books