ಗೌರಿ ನೋಟ

Author : ಬಸವರಾಜ ಸೂಳಿಭಾವಿ (ಬಸೂ)

Pages 376

₹ 150.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಕರ್ನಾಟಕಕ್ಕೆ ಒಂದೆಡೆ ಆಘಾತ ಉಂಟು ಮಾಡಿತು. ಜೊತೆಗೆ ಚದುರಿ ಹೋಗಿದ್ದ ಯುವಜನರನ್ನು ಒಟ್ಟಿಗೆ ಸೇರಿಸಲು ಕಾರಣವಾಯಿತು. ಆಕೆಯ ಹತ್ಯೆಯನ್ನು ಕಂಡು ಮರುಗಿದವರು ದೊಡ್ಡ ಸಂಖ್ಯೆಯಲ್ಲಿದ್ದರು. ’ನಾನು ಗೌರಿ- ನಾವು ಗೌರಿ’ ಎಂಬ ಘೋಷಣೆಗಳು ಮೊಳಗಿದವು. ಗೌರಿ ಲಂಕೇಶ್‌ ಬಗ್ಗೆ ಅನೇಕರು ಬರೆದರು. ನೆನಪುಗಳನ್ನು ಹಂಚಿಕೊಂಡರು. ಅವುಗಳನ್ನೆಲ್ಲ ಒಂದೆಡೆ ಸೇರಿಸಿ ಲಡಾಯಿ ಪ್ರಕಾಶನ ’ಗೌರಿ ನೊಟ’ ಎಂಬ ಕೃತಿ ಹೊರತಂದಿದೆ. ಪ್ರಕಾಶಕ ಬಸು ಮತ್ತು ಲೇಖಕ ಪಂಪಾರೆಡ್ಡಿ ಅರಳಹಳ್ಳಿ ಕೃತಿಯನ್ನು ಸಂಪಾದಿಸಿದ್ದಾರೆ. 

ಸಹೋದರಿ ಕವಿತಾ ಲಂಕೇಶರ ಕವಿತೆ, ತಾಯಿ ಇಂದಿರಾ ಅವರ ಲೇಖನ, ಗೌರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಪತ್ರಕರ್ತ ಚಿದಾನಂದ ರಾಜಘಟ್ಟ ಅವರ ’ಇತಿಹಾಸವಾದ ರೆಬೆಲ್ ಹುಡುಗಿ' ಎಂಬ ಕಾಡುವ ಲೇಖನಗಳು ಭಾವನಾತ್ಮಕವಾಗಿ ಕಲಕುತ್ತವೆ. ಮತ್ತೊಂದೆಡೆ ಚಿಂತಕರಾದ ಶ್ರೀನಿವಾಸ ಕಾರ್ಕಳ, ಯೋಗೇಶ್ ಮಾಸ್ಟರ್, ದಿನೇಶ್ ಅಮೀನ್ ಮಟ್ಟು ಮೊದಲಾದವರು ಗೌರಿ ಕುರಿತ ಒಡನಾಟವನ್ನು ಹಂಚಿಕೊಂಡಿದ್ದಾರೆ. 

ಎರಡನೇ ಅಧ್ಯಾಯ ಗೌರಿ ಹತ್ಯೆಯನ್ನೇ ಕೇಂದ್ರೀಕರಿಸಿ ಸಂಪಾದಿಸಿದ ಲೇಖನಗಳಿಂದ ಕೂಡಿದೆ. ಹತ್ಯೆ ಕುರಿತಂತೆ ವಿವಿಧ ಲೇಖಕರ ಸ್ಪಂದನ, ಇಂಗ್ಲಿಷ್‌ ಬರಹಗಳ ಭಾವಾನುವಾದ ಇದೆ. ನಾಲ್ಕನೇ ಅಧ್ಯಾಯ ಸಂಪೂರ್ಣ ಗೌರಿ ಅವರನ್ನು ಕುರಿತ ಪದ್ಯಗಳಿಗೆ ಮೀಸಲು. ಜೀವಪರತೆಯ ಹೊಳೆಯೇ ಕೃತಿಯ ಉದ್ದಕ್ಕೂ ಹರಿದಿದೆ. 

About the Author

ಬಸವರಾಜ ಸೂಳಿಭಾವಿ (ಬಸೂ)

.ಬಸವರಾಜ ಸೂಳಿಭಾವಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ರೂಡಗಿ ಗ್ರಾಮದವರು. ಆದರೆ ಈಗ ಧಾರವಾಡ ನಿವಾಸಿ. ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವೀಧರರು. ‘ಲಡಾಯಿ’ ಎಂಬ ವಾರಪತ್ರಿಕೆ ಆರಂಭಿಸಿದ್ದರು. ಸದ್ಯ ಲಡಾಯಿ ಪ್ರಕಾಶನ ನಡೆಸುತ್ತಿದ್ದಾರೆ.  ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ತೇವ ಕಾಯುವ ಬೀಜ-ಇವರ ಕವನ ಸಂಕಲನ.ಗೌರಿ ನೋಟ (ಲೇಖನಗಳ ಸಂಪಾದನಾ ಕೃತಿ).  ...

READ MORE

Related Books