ಗೋವು ಪವಿತ್ರ ಎಂಬ ಮಿಥ್ಯೆ

Author : ನಾ. ದಿವಾಕರ

Pages 115

₹ 72.00




Year of Publication: 2010
Published by: ಲಂಕೇಶ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 080-26676427

Synopsys

ಸಾಹಿತಿ ನಾ. ದಿವಾಕರ ಅವರ ಕೃತಿ-ಗೋವು ಪವಿತ್ರ ಎಂಬ ಮಿಥ್ಯೆ. ಅನಾದಿ ಕಾಲದಿಂದಲೂ ಮನುಷ್ಯ ಗೋವುಗಳನ್ನು ಕೃಷಿಗಾಗಿ, ಆಹಾರಕ್ಕಾಗಿ ಬಳಸಿದ್ದು ನಮಗೆ ಇತಿಹಾಸ ತಿಳೀಸುತ್ತದೆ. ಆದರೆ, ಒಂದು ವರ್ಗ ಮಾತ್ರ ಗೋವುಗಳು ಪವಿತ್ರ ಎಂದು ಹೇಳುವ ಮೂಲಕ ಬಹುತೇಕ ವರ್ಗದ ಜನರ ಆಹಾರವನ್ನು ಕಸಿಯುತ್ತಿದ್ದಾರೆ. ಮಾತ್ರವಲ್ಲ; ಗೋವುಗಳ ಹೆಸರಿನಲ್ಲಿ ಜನಸಾಮಾನ್ಯರ ಶೋಷಣೆಯೂ ನಡೆಯುತ್ತಿದೆ. ಈ ಎಲ್ಲ ವಿದ್ಯಮಾನದ ವಿರುದ್ಧ ಐತಿಹಾಸಿಕ ಸಾಕ್ಷ್ಯಾಧಾರಗಳ ಸಮೇತ ಬರೆದ ಚಿಂಥನೆಗಳು ಇಲ್ಲಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಗೋಮಾಂಸ ಸೇವನೆ ಹಾಗೂ ಅಸ್ಪೃರ್ಶಯತೆ ಕುರಿತು ವ್ಯಕ್ತಪಡಿಸಿದ ವಿಚಾರಗಳ ಲೇಖನಗಳೂ ಈ ಕೃತಿಯಲ್ಲಿ ಒಳಗೊಂಡಿವೆ.ಡಿ.ಎನ್. ಝಾ ಅವರು ಮೂಲ ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ನಾ. ದಿವಾಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books