ಗ್ರಾಮಾಯಣ: ಸಾಂಸ್ಕೃತಿಕ ಮುಖಾಮುಖಿ

Author : ಅಮರೇಶ ನುಗಡೋಣಿ

Pages 186

₹ 120.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಉತ್ತರ ಕರ್ನಾಟಕ ಜನರ ಬದುಕು-ಭಾಷೆ-ಸಂಸ್ಕೃತಿ, ಸ್ವಾತಂತ್ಯ್ರಪೂರ್ವ ಸಮಾಜದ ಸ್ವರೂಪವನ್ನು ಸ್ವಷ್ಟವಾಗಿ ಬಿಂಬಿಸುವ ರಾವ್ ಬಹಾದ್ದೂರ್ ಅವರ 'ಗ್ರಾಮಾಯಣ' ಕಾದಂಬರಿ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಸಂಗ್ರಹಿಸಿ, ಸಂಕಲಿಸಿ ’ಗ್ರಾಮಾಯಣ: ಸಾಂಸ್ಕೃತಿಕ ಮುಖಾಮುಖಿ' ಕೃತಿಯನ್ನು ರಚಿಸಲಾಗಿದೆ.

ಕಾದಂಬರಿಯ ಕುರಿತು ಲೇಖಕ ಅಮರೇಶ ನುಗಡೋಣಿ ವಿವರಿಸಿ, ಬ್ರಿಟಿಷರ ಆಡಳಿತ ಆರಂಭವಾದಾಗ ಗ್ರಾಮೀಣ ಜನ ಸಮುದಾಯಗಳು ಎದುರಿಸಿದ ಬಿಕ್ಕಟ್ಟುಗಳು, ಅನುಭವಿಸಿದ ತಲ್ಲಣಗಳ ಪಾಡನ್ನು ಸಮರ್ಥವಾಗಿ ಹೇಳುತ್ತದೆ. ವಾಡೇ, ಮಠ ಮತ್ತು ಬ್ರಿಟಿಷ್‌ ವಸಾಹತು ಈ ಮೂರು ಅಧಿಕಾರ ಕೇಂದ್ರಗಳಾದಾಗ ಜನಸಾಮಾನ್ಯರು ಈ ಮೂರು ಅಧಿಕಾರಗಳ ಜೊತೆಗೆ ಬದುಕುವ, ಅವುಗಳ ಸಂಬಂಧದ ನಡುವೆ ಹೊಮ್ಮುವ ಸಂಘರ್ಷಗಳು ಒಂದು ಊರನ್ನು ನಾಶದ ಅಂಚಿಗೆ ತಳ್ಳುತ್ತವೆ ಎಂಬ ವಾಸ್ತವ ಸಂಗತಿಯನ್ನು ಈ ಕಾದಂಬರಿ ಗಮನಾರ್ಹವಾಗಿ ಚಿತ್ರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books