ಗುಡ್ಡದ ಮೈಲಾರಲಿಂಗನ ವಚನಗಳು

Author : ಲಿಂಗಾರೆಡ್ಡಿ ಶೇರಿ

Pages 104

₹ 100.00




Year of Publication: 2017
Published by: ಶ್ರೀ ಸಸಾ ಪ್ರಕಾಶನ
Address: ಜಾಕನಹಳ್ಳಿ-585318, ತಾ: ಸೇಡಂ, ಜಿಲ್ಲೆ: ಕಲಬುರಗಿ

Synopsys

ಕವಿ ಲಿಂಗಾರೆಡ್ಡಿ ಶೇರಿ ಅವರ ಕೃತಿ ಗುಡ್ಡದ ಮೈಲಾರಲಿಂಗನ ವಚನಗಳು. ಯಾದಗಿರಿ ಜಿಲ್ಲೆಯ ಹಾಗೂ ಯಾದಗಿರಿ ಸಮೀಪದ ಮೈಲಾರಲಿಂಗನ ಗುಡ್ಡ ಎಂದೇ ಖ್ಯಾತಿಯ ಈ ಸ್ಥಳದ (ಮೈಲಾರ)  ಮಹಿಮೆಯೂ ಪ್ರಸಿದ್ಧಿ ಪಡೆದಿದೆ. ಲೇಖಕರ ಕುಲದೈವ ಗುಡ್ಡದ ಮೈಲಾರಲಿಂಗನ ಹೆಸರಲ್ಲಿ(ಅಂಕಿತ ನಾಮದೊಂದಿಗೆ) 290 ವಚನಗಳನ್ನು ಈ ಸಂಕಲನದಲ್ಲಿ ಸೇರ್ಪಡೆಗೊಳಿಸಿದ್ದು, ಓದುಗರ ಗಮನ ಸೆಳೆಯುತ್ತದೆ. ಸಾಮಾಜಿಕ ವಿದ್ಯಮಾನಗಳು, ಕೌಟುಂಬಿಕ ವ್ಯವಹಾರಗಳು, ಅಧ್ಯಾತ್ಮಿಕ, ತಾರ್ಕಿಕ ವಿಷಯಗಳು ವಚನಗಳ ವಸ್ತುಗಳಾಗಿವೆ.  

ಸಾಹಿತಿ ಡಾ. ಜಯಶ್ರೀ ದಂಡೆ ಅವರು ಕೃತಿಗೆ ಮುನ್ನುಡಿ ಬರೆದು ‘ಲಿಂಗಾರೆಡ್ಡಿ ಅವರ ವಚನಗಳಲ್ಲಿ ಒಂದು ಮಾಂತ್ರಿಕತೆ ಇದೆ. ಅವರ ಲೋಕಜ್ಞಾನ ವಿಸ್ತಾರವಾಗಿದೆ. ದೇಸಿಯತೆಯ ಪರಿಣಿತಿ ಇದೆ. ನಾಣ್ಣುಡಿಗಳಂತಹ ಮಾತುಗಳನ್ನು, ಜಾನಪದ ಕಾವ್ಯದ ತಿರುಳನ್ನು,ಬಂಡಾಯದ ಧೋರಣೆಯನ್ನು, ವಿಡಂಬನೆಯ ಮೊನಚನ್ನು, ಸಾಮಾಜಿಕ-ಧಾರ್ಮಿಕ-ಕೌಟುಂಬಿಕ ಕಾಳಜಿಯನ್ನು,ಸೌಹಾರ್ದತೆಯ ಕನಸನ್ನು, ಸಂಬಂಧಗಳ ಬಂಧುರತೆಯನ್ನು, ಸ್ವಭಾವಗಳ ಭಿನ್ನತೆಯನ್ನು, ವಚನಗಳಿಗೆ ವಸ್ತುವಾಗಿರಿಸಿಕೊಂಡಿದ್ದಾರೆ. ವಚನಗಳ ಭಾಷೆ ಸರಳ-ಸುಂದರವಾಗಿದೆ. ಥಟ್ಟನೆ ಮನ ಮುಟ್ಟುವ ಶೈಲಿ ಇದೆ’ ಎಂದು ಪ್ರಶಂಸಿಸಿದ್ದಾರೆ.  

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books