ಗುಳ್ಳಕಾಯಜ್ಜಿ

Author : ಚಂದ್ರಶೇಖರ ಕಂಬಾರ

Pages 80

₹ 150.00




Year of Publication: 2018
Published by: ಸಂಪಿಗೆ ಪ್ರಕಾಶನ
Address: ಬೆಂಗಳೂರು

Synopsys

ಬಾಹುಬಲಿ ಮಹಾರಾಯ ಜಯ ಕುರಿತು ಡಾ. ಚಂದ್ರಶೇಖರ ಕಂಬಾರರು ಬರೆದ ನಾಟಕ -ಗುಳ್ಳಕಾಯಜ್ಜಿ. ಬಾಹುಬಲಿಯಯೊಂದಿಗೆ ಭರತನ ಸಂಬಂಧದ ಬಗೆ, ಬಾಹುಬಲಿಯ ತ್ಯಾಗಮಯವಾದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ ವಸ್ತುವಿನ ನಾಟಕವಿದು. ಚಾವುಂಡರಾಯನು ಸಂಗ್ರಹಿಸಿಟ್ಟ ಹಾಲಿನ ಪ್ರಮಾಣವು ಗೊಮ್ಮಟೇಶ ಮೂರ್ತಿಗೆ ಅಭಿಷೇಕ ನಡೆಸಲು ಸಾಕಾಗದು. ಆದರೆ, ಗುಳ್ಳಕಾಯ ಎಂಬ ಒಂದು ಅಜ್ಜಿ ಗುಳ್ಳೆಯಂತಹ ಒಂದು ಸಣ್ಣ ಕೊಡದಲ್ಲಿ ಹಾಲು ಸಂಗ್ರಹಿಸಿದ್ದು, ಅದನ್ನು ಎರೆದರೆ ಇಡೀ ಗೊಮ್ಮಟನ ಮೂರ್ತಿಯನ್ನು ನೆನೆಯಿತು ಎಂಬುದು ಈ ನಾಟಕದ ವಸ್ತು.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books