ಹಾಡುಹಕ್ಕಿ ಅಂಬಿಕಾತನಯದತ್ತ

Author : ಜಿ. ಕೃಷ್ಣಪ್ಪ

Pages 120

₹ 25.00




Year of Publication: 1995
Published by: ಶ್ರೀರಂಗ ಪ್ರಕಾಶನ
Address: ಶ್ರೀರಂಗ ಪ್ರಕಾಶನ, ಬಿ.94, ಸಿ.ಎಫ್.ಟಿ.ಆರ್.ಐ.ಕಾಲೋನಿ,ಮೈಸೂರು-13

Synopsys

ಹಾಡುಹಕ್ಕಿ ಅಂಬಿಕಾತನಯದತ್ತ- ಈ ಕೃತಿಯಲ್ಲಿ ಬೇಂದ್ರೆ ಅವರ ಜೀವನದ ಪ್ರಮುಖ ಅಂಶಗಳೂ ಕೂಡಿಕೊಂಡಂತೆ ಸಾಹಿತ್ಯ ಸಿದ್ಧಿಯ ಹಲವು ಮಜಲುಗಳನ್ನು ವಿವರಿಸಲಾಗಿದೆ. ಕವಿಯೊಂದಿಗಿನ ಸಹೃದಯನೊಬ್ಬನ ಸಂವಾದ ಸ್ಪಂದನ ಇಲ್ಲಿ ಗೋಚರಿಸುತ್ತದೆ. ಬೇಂದ್ರೆ ಅವರ ಸಮಗ್ರ ,ಜೀವನದ ಚಿಂತನೆಯ ಸಿಂಹಾವಲೋಕನ ಇಲ್ಲಿ ನಡೆದಿದ್ದು, ಈ ದೃಷ್ಟಿಯಿಂದ ಹಾಡುಹಕ್ಕಿ ಅಂಬಿಕಾತನಯದತ್ತ ಕೃತಿ ಮುಖ್ಯವಾಗುತ್ತದೆ. 

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books