
ನಾಗ ಎಚ್. ಹುಬ್ಳಿ ಅವರ `ಹಾಕಿ ಮಾಂತ್ರಿಕ ಧ್ಯಾನ ಚಂದ್' ಕೃತಿಗೆ ಗೋಪಾಲಕೃಷ್ಣ ಹೆಗಡೆ ಅವರ ಬೆನ್ನುಡಿ ಬರಹವಿದೆ: ಕನ್ನಡದಲ್ಲಿ ಕ್ರೀಡಾ ಪುಸ್ತಕಗಳು ಬಹಳ ಕಡಿಮೆ. ಅದರಲ್ಲೂ ಹಾಕಿ ಆಟದ ಬಗ್ಗೆ ವಿಶೇಷ ಪುಸ್ತಕಗಳು ಇಲ್ಲವೇ ಇಲ್ಲ ಎನ್ನಬಹುದು. ಆ ಕೊರತೆಯನ್ನು ನೀಗಿಸುವ ಉತ್ತಮ ಪ್ರಯತ್ನವನ್ನು 'ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್' ಮೂಲಕ ಡಾ. ನಾಗ ಎಚ್. ಹುಬ್ಳಿಯವರು ಮಾಡಿದ್ದಾರೆ. ಬದುಕಿರುವಾಗಲೇ ದಂತಕಥೆಯಾದವರು ಧ್ಯಾನಚಂದ್. ಅವರ ಬಾಲ್ಯ, ಆಟ, ಒಲಿಂಪಿಕ್ಸ್ ಸಾಧನೆ, ಬದುಕಿನ ಕೊನೆಯವರೆಗಿನ ಕತೆ ಇಲ್ಲಿ ಓದುಗರ ಮನ ಮುಟ್ಟುತ್ತದೆ. ಯುವ ಆಟಗಾರರಿಗೆ ಸ್ಫೂರ್ತಿ ಮೂಡಿಸುತ್ತದೆ. ಇಲ್ಲಿನ ಬರೆವಣಿಗೆ ಸರಳವಾಗಿಯೂ, ಸ್ಪಷ್ಟವಾಗಿಯೂ ಇದೆ. ಯಾವ ಪ್ರಾಧ್ಯಾಪಕನಲ್ಲಿಯೂ ಕ್ರೀಡೆಯ ಬಗ್ಗೆ ಆಸಕ್ತಿ, ಬರೆಯುವ ಉತ್ಸಾಹವನ್ನು ನಾನು ಕಂಡಿಲ್ಲ. ಡಾ. ನಾಗ ಎಚ್. ಹುಬ್ಳಿಯವರಿಗೆ ಅಭಿನಂದನೆಗಳನ್ನು ತಿಳಿಸುವ ಮೂಲಕ ಈ ಪುಸ್ತಕಕ್ಕೆ ಸುಂದರವಾದ ಬರಹವನ್ನು ನೀಡಿದ್ದಾರೆ.
©2025 Book Brahma Private Limited.