ಹದಿಬದೆಯ ಧರ್ಮ

Author : ಎನ್. ರಂಗನಾಥಶರ್ಮಾ

Pages 154

₹ 60.00




Year of Publication: 2011
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560018

Synopsys

ವಿದ್ವಾನ್ ಎನ್. ರಂಗನಾಥ ಶರ್ಮ ಅವರ ಸಂಪಾದಿತ ಕೃತಿ-ಹದಿಬದೆಯ ಧರ್ಮ. ಬೆಂಗಳೂರಿನಲ್ಲಿ (2011) ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಕಟಿಸಿರುವ ಕೃತಿ ಇದು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನಮಾನ ದೊರಕಿದ್ದೇ ಹದಿಬದೆಯ ಧರ್ಮದಂತಹ ಕೃತಿಗಳಿಂದ. ಮಗಳು, ಹೆಂಡತಿ, ತಾಯಿ, ಅಕ್ಕ., ತಂಗಿ ಹೀಗೆ ಬದುಕಿನ ಬಹುಪಾತ್ರಧಾರಿಯಾಗಿ ಅಷ್ಟೇ ಮೌಲಿಕತೆಯ ಅಗತ್ಯವನ್ನು ಪ್ರತಿಪಾದಿಸುವ ಹೆಣ್ಣು ಇಡೀ ಜೀವನದ ಕೇಂದ್ರವೇ ಆಗಿದ್ದಾಳೆ. ಗಂಡ-ಹೆಂಡತಿಯ ಧರ್ಮವೇನು? ಅದರ ಸ್ವರೂಪ ಹೇಗೆ? ಸಂಸಾರಿಕ ಧರ್ಮ ಹೇಗಿರಬೇಕು? ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಮೈಸೂರು ಅರಸ ಚಿಕ್ಕದೇವರಾಜರ ಕಾಲದಲ್ಲಿದ್ದ ಸಂಚಿಯ ಹೊನ್ನಮ್ಮ ಎಂಬ ಮಹಿಳೆ ಈ ಕೃತಿಯನ್ನು ರಚಿಸಿದ್ದಳು ಎಂದು ಹೇಳಲಾಗುತ್ತಿದೆ. ಈಕೆ ಎಳಂದೂರಿನವಳು. ಪಟ್ಟದರಸಿ ದೇವರಾಜಮ್ಮಣ್ಣಿಯ ಸ್ನೇಹದಿಂದ ಅವಳು ಅರಮನೆ ಪ್ರವೇಶಿಸುತ್ತಾಳೆ. ಈಕೆಯ ವಿದ್ವತ್ ಕಂಡುಕೊಂಡ ಅರಸಿ, ಕಾವ್ಯ ರಚಿಸಲು ಸೂಚಿಸಿದ್ದರ ಫಲವೇ-ಹದಿಬದೆಯ ಧರ್ಮ. ಸಂಚಿಯ ಹೊನ್ನಮ್ಮ ಕಾಲವಾಗಿ ಮುನ್ನೂರು ವರ್ಷಗಳು ಸಂದಿವೆ. ಆದರೆ, ಆಕೆಯ ಕಾವ್ಯ ಹೆಣ್ಣಿರುವವರೆಗೂ ಹೆಣ್ಣಿನ ಧರ್ಮವನ್ನು ಕಾಯುತ್ತಿರುತ್ತದೆ.

 

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books