ಹಾಡು ಹಿಡಿದ ಜಾಡು ಕೃತಿಯು ವೈ.ಕೆ.ಮುದ್ದುಕೃಷ್ಣ ಅವರ ಆತ್ಮಕಥನವಾಗಿದ್ದು. ಡಾ.ನಾ. ದಾಮೋದರ ಶೆಟ್ಟಿ ಅವರು ಕೃತಿಯನ್ನು ರಚಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ವೈ.ಕೆ.ಮುದ್ದುಕೃಷ್ಣ (ವೈ. ಕೆ.ಎಂ) ಅವರ ಆತ್ಮಚರಿತ್ರೆ ಈ ಕೃತಿಯು,ಸ್ವಂತ ಜೀವನದ ಕಥನವಾಗಿದೆ. ಹಾಗೂ ಅವರ ಜೊತೆ ಒಡನಾಡಿದವರ ಮಾತುಗಳೂ ಕೂಡಿರುವುದು ವಿಶೇಷ. ಜೊತೆಗೆ ವೈ.ಕೆ.ಎಂ ಅವರ 75ನೇ ಜನ್ಮದಿನದ ಸಂದರ್ಭದಲ್ಲೇ ಇದು ಹೊರಬಂದಿದೆ ಎಂಬುದು ಮತ್ತೂಂದು ವಿಶೇಷವಾಗಿದೆ. ವೈ.ಕೆ.ಮುದ್ದುಕೃಷ್ಣ ಜೀವನಗಾಥೆಯ ಘಟನಾವಳಿಗಳ ಕುರಿತಂತೆ ಇದೊಂದು ಚರಿತ್ರಾರ್ಹ ದಾಖಲಾತಿ ಎಂಬುದು ನನ್ನ ಭಾವನೆ ಸಾರ್ವಜನಿಕ ಸೊತ್ತಾಗಿದ್ದ ಮುದ್ದುಕೃಷ್ಣ ಅವರು ಸಂಸಾರಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಿದವರು, ಆದರೆ ಸಾರ್ವಜನಿಕಕ್ಕಿರುವ ತಾಕತ್ತು ಬೃಹತ್ತಾದಾಗಲಷ್ಟೇ ದಾಖಲಾತಿಗೆ ಮಹತ್ವ ಒದಗುವುದು. ದೃಷ್ಟಿಯಲ್ಲಿ ಮುದ್ದುಕೃಷ್ಣ ಅವರ ಬದುಕು ಸಾರ್ವಜನಿಕ ಕ್ಷೇತ್ರದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಬೇಕಾದ ಅನಿವಾರ್ಯತೆಯಿದೆ. ಮುಂದಿನ ಪೀಳಿಗೆ ಅರಿತು, ಅನುಭವಿಸಿ, ವರ್ತಿಸಬೇಕಾದ ಅನೇಕ ಎಷಯಗಳನ್ನು "ಹಾಡು ಹಿಡಿದ ಜಾಡು” ಹೊಂದಿದೆ ಎಂಬುದನ್ನು ಕಂಡುಕೊಂಡು ಶಮನಂದಿಬೆಟ್ಟ ಹಾಗೂ ನಾನು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಮುದ್ದುಕೃಷ್ಣ ಅವರ ಪರಿವಾರ ಬೃಹತ್ತಾದುದು. ಅವರ ಕುರಿತು ಹಿತೈಷಿಗಳು, ಅಭಿಮಾನಿಗಳು ಆಡುವ ಮಾತು, ನೀಡುವ ಪ್ರತಿಕ್ರಿಯೆ ಅನ್ಯಾದೃಶವಾದುದು. - ಅವರಲ್ಲಿ ಕೆಲವರ ಅಭಿಪ್ರಾಯಗಳನ್ನೂ ಪ್ರತಿಕ್ರಿಯೆಗಳನ್ನೂ ಇಲ್ಲಿ ಕೂಡಿಸಿಕೊಂಡಿದ್ದೇವೆ. ಮುದ್ದುಕೃಷ್ಣ ಅವರ “ಹಾಡೆಂಬ ಎಪ್ಪತೈದು ಬಸಂತಗಳ ಜಾಡಿಗೆ ಇವು ಪೂರಕ ಬೆಸುಗೆಗಳಾಗುವವು ಎಂಬುದು ನಮ್ಮ ವಿಶ್ವಾಸ. ಅಷ್ಟೊಂದು ವರ್ಣಮಯ ಬದುಕನ್ನು ವೈ.ಕೆ.ಎಂ ಅವರು “ನೋಡಿ ಕಂಡ” ಎಂಬುದು “ಹಾಡು ಹಿಡಿದ ಜಾಡು” ಅನ್ನು ಓದುವಾಗ ನೀವೇ ಕಾಣುವಿರಿ ಎಂದು ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ನಾ.ದಾಮೋದರ ಶೆಟ್ಟಿ ತಿಳಿಸಿದ್ದಾರೆ.
ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...
READ MORE