ಹಣ ಪ್ರಪಂಚ

Author : ವಿ. ಸೀತಾರಾಮಯ್ಯ

Pages 396




Year of Publication: 1937
Published by: ಮೈಸೂರು ವಿಶ್ವವಿದ್ಯಾಲಯ
Address: ಮೈಸೂರು

Synopsys

ಹಣದ ಪ್ರಪಂಚ ಕುರಿತು ಬರೆದ ಕೃತಿಯಾದರೂ ಕನ್ನಡ ಭಾಷೆ ಅಭಿವೃದ್ಧಿಗೆ ಪೂರಕ ಎಂದು ಮುನ್ನುಡಿ ಬರೆಯುತ್ತಿರುವುದಾಗಿ ಆರ್ಥಿಕ ತಜ್ಞ ಎನ್.ಎಸ್. ಸುಬ್ಬಾರಾವ್ ಅವರು ಸಾಹಿತಿ ಹಾಗೂ ಆರ್ಥಿಕ ತಜ್ಞರೂ ಆದ ವೀ. ಸೀತಾರಾಮಯ್ಯ ಅವರ ‘ಹಣ ಪ್ರಪಂಚ’ ಕೃತಿಯ ಉದ್ದೇಶವನ್ನು ಪ್ರಶಂಸಿಸಿದ್ದಾರೆ. ಈ ಕೃತಿಯಲ್ಲಿ ಹಣ, ಉದ್ಯೋಗ ಉತ್ಪತ್ತಿ, ಜೀವನ ಸೌಕರ್ಯ, ಸಂಪತ್ತಿನ ಹಂಚಿಕೆ., ಭೋಗದ ವಿತರಣೆ ಇತ್ಯಾದಿ ವಿವರಣೆ ಇದೆ. ರೂಪಾಯಿ ನೋಟಿನಲ್ಲಿಏನೇನು ಸಂಗತಿಗಳನ್ನು ರಹಸ್ಯವಾಗಿಡಲಾಗುತ್ತದೆ ಎಂಬ ಬಗ್ಗೆಯೂ ಜನಕ್ಕೆ ತಿಳಿದಿಲ್ಲ. ಅದನ್ನು ಜನರ ಭಾಷೆಯಲ್ಲೇ ಕಟ್ಟಿಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ತಾವು ಪ್ರಯತ್ನಿಸಿದ್ದಾಗಿ ಲೇಖಕರು ಹೇಳಿದ್ದಾರೆ.

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Related Books