ಹಣತೆಗೆ ಹನಿ ಎಣ್ಣೆ

Author : ತಾಳ್ತಜೆ ವಸಂತಕುಮಾರ

Pages 290

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ವಿಮರ್ಶೆ, ಚಿಂತನೆ, ಸಂಕೀರ್ಣ ಎನ್ನುವ ಮೂರು ಭಾಗಗಳಿವೆ. ವಿಮರ್ಶೆಯ ಭಾಗದಲ್ಲಿ ಕನ್ನಡ ಹಿರಿಯ ಲೇಖಕರ ಕೃತಿಗಳನ್ನು ವಿಶಿಷ್ಟ ಒಳನೋಟಗಳಿಂದ ಅವಲೋಕಿಸಲಾಗಿದೆ. ಚಿಂತನೆಯ ಭಾಗದಲ್ಲಿ, ಕನ್ನಡ ಚಿಂತನಾ ಸಾಹಿತ್ಯ ಕುರಿತ ವಿಶೇಷವಾದ ಚರ್ಚೆ ಇದೆ. ಸಂಕೀರ್ಣಭಾಗದಲ್ಲಿ ಸಂಶೋಧನೆ, ಸಂಸ್ಕೃತಿ ಮತ್ತು ಬೌದ್ಧ ಧರ್ಮದ ಕುರಿತ ವಿಶೇಷ ಅಧ್ಯಯನಗಳಿವೆ.

About the Author

ತಾಳ್ತಜೆ ವಸಂತಕುಮಾರ
(27 December 1948)

ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ತಾಳ್ತಜೆ ವಸಂತಕುಮಾರ ವಿಮರ್ಶೆ ಹಾಗೂ ಸಾಂಸ್ಕೃತಿಕ ಸಂಶೋಧನೆಯಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ಈಗಿನ ಕೇರಳದ ಕಾಸರಗೋಡಿನ ತಾಳ್ತಜೆಯವರಾದ ಅವರು ಜನಿಸಿದ್ದು 1948 ಡಿಸೆಂಬರ 27ರಂದು. ಸ್ನಾತಕೋತ್ತರ ಪದವಿ (ಎಂಎ ಕನ್ನಡ) ಪಡೆದಿರುವ ಅವರು ಸಿದ್ಧಪಡಿಸಿದ ’ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ದೊರೆತಿದೆ. ಸದ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದಾರೆ. ಹರಿಹರನ ರಗಳೆಗಳು, ಸಿಂಗಾರ, ಆಯ್ದ ಲೇಖನಗಳು (ವಿಮರ್ಶೆ), ದಾಸಸಾಹಿತ್ಯ, ಹಣತೆಗೆ ಹನಿ ಎಣ್ಣೆ (ಸಾಂಸ್ಕೃತಿಕ ಸಂಶೋಧನೆ), ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಶಿವರಾಮ ಕಾರಂತ (ಜೀವನ ...

READ MORE

Related Books