ಹನಿ ಮಳೆಯ ಮಣ್ಣ ಕಂಪು

Author : ಅನನ್ಯ ತುಷಿರಾ

Pages 85

₹ 95.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಸುರೇಶ್ ಷಾ ಕುಟುಂಬದವರು ಗಾಂಧಿನಾಡಿನಿಂದ ಕನ್ನಡ ನಾಡಿಗೆ ಬಂದರು, ಕನ್ನಡಿಗರನ್ನು ಅಭಿಮಾನದಿಂದ ಅಪ್ಪಿದರು, ಅವರ ಮನಸ್ಸನ್ನು ಅಪಹರಿಸಿದರು. ಕರ್ನಾಟಕದ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮುಖ್ಯವಾಹಿನಿಯಲ್ಲಿ ಬೆರೆತರು. ತೆವಳುತ್ತಿದ್ದ ಪುಸ್ತಕೋದ್ಯಮವನ್ನು ಪುನರುಜ್ಜಿವಿಸಿದರಲ್ಲದೆ ಪುಸ್ತಕ ಸಂಸ್ಕೃತಿಗೆ ಕಾಯಕಲ್ಪವೆಸಗಿದರು. ಓದುಗರು, ಬರಹಗಾರರು, ಪ್ರಕಾಶಕರು, ಮಾರಾಟಗಾರರು-ಇವರೆಲ್ಲರನ್ನೂ ಒಗ್ಗೂಡಿಸುವ ಸುವರ್ಣ ಕೊಂಡಿಯಾದರು. ಅಂದು ಸುರೇಶ್ ಷಾರವರು ನೆಟ್ಟ ಪುಟ್ಟ ಪುಸ್ತಕ ಸಸಿ ಇಂದು 'ಸಪ್ನ ಬುಕ್ ಹೌಸ್' ಎಂಬ ತೋರ ಹೆಮ್ಮರವಾಗಿ ಬೆಳೆದಿದೆ, ಹಲವಾರು ಕೊಂಬೆ ರೆಂಬೆಗಳಿಂದ ಭವ್ಯವಾಗಿ ಕಂಗೊಳಿಸುತ್ತಿದೆ. ಎಲ್ಲ ಬಗೆಯ ಅಭಿರುಚಿಗಳನ್ನು ತಣಿಸುವ ಮೌಲಿಕ ಕೃತಿಗಳು ದೊರೆಯುವ ಪುಸ್ತಕ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ತಾರತಮ್ಯವಿರದ ಚೊಕ್ಕ ವ್ಯವಹಾರದಿಂದ ಸಪ್ನ ಬುಕ್ ಹೌಸ್ ಕನ್ನಡಿಗರ ಪ್ರೀತಿಯ ಪುಸ್ತಕ ಭಂಡಾರವೆನಿಸಿದೆ. ಸಪ್ನ ಬುಕ್ ಹೌಸ್‌ನ ನಾನಾ ಕೊಡುಗೆಗಳಲ್ಲಿ ಪ್ರಮುಖವಾದುದು ಕನ್ನಡ ರಾಜ್ಯೋತ್ಸವ ಆಚರಣೆಗೆ ನೀಡಿದ ದಿವ್ಯ ತಿರುವು. ನಾಡು ಸಡಗರದಿಂದ ಆಚರಿಸುವ ರಾಜ್ಯೋತ್ಸವವನ್ನು ಕನ್ನಡ ಪುಸ್ತಕೋತ್ಸವದ ಹಬ್ಬವನ್ನಾಗಿ ಪರಿವರ್ತಿಸಿದರು. ಈ ಬಗೆಯ ಅರ್ಥಪೂರ್ಣ ಹೊಸ ಮಾರ್ಗ ಪ್ರವರ್ತಕರಾದ ಹೆಮ್ಮೆಯ ಸಪ್ನ ಬುಕ್ ಹೌಸ್ ಬಳಗಕ್ಕೆ ಹೃತೂರ್ವಕ ಅಭಿನಂದನೆಗಳನ್ನು ತಿಳಿಸಲು ಖುಷಿ ಆಗುತ್ತದೆ. ನಾಡೋಜ ಪ್ರೊ. ಕಮಲಾ ಹಂಪನಾ

About the Author

ಅನನ್ಯ ತುಷಿರಾ

ಅನನ್ಯ ತುಷಿರಾ (ಸವಿತಾ ಆರ್.ಇನಾಮದಾರ್) ಮೂಲತಃ ಬಿಜಾಪುರ (ವಿಜಯಪುರ) ಜಿಲ್ಲೆ ತಾಳೀಕೋಟೆಯವರು. ತಂದೆ ಶ್ರೀ ರಾಜಪ್ಪ ಇನಾಮದಾರ ಮತ್ತು ತಾಯಿ ಶ್ರೀಮತಿ ಅನಸೂಯಾ ಇನಾಮದಾರ. ತನ್ನದೇ ಪುಟ್ಟ ಅಕ್ಷರ ಜಗತ್ತಿನಲ್ಲಿ 'ಅನನ್ಯ ತುಷಿರಾ'. ಜೀವ-ಭಾವದ ಸಂಗಾತಿ ಕಿರಣ್ ಬಿರಾದಾರ್. ಹಾಗಾಗಿ ಇವರು 'saki’ ಕೂಡ. ಮಡಿಲ ಬೆಳಕು ಅಶ್ಮಯು ನಿನಾದ. ಬಹುತೇಕ ಓದು ತಾಳಿಕೋಟೆಯಲ್ಲಿ. ನಂತರ ಧಾರವಾಡದಲ್ಲಿ. ಸದ್ಯ ಬೆಂಗಳೂರು ವಾಸಿ. ಮೊದಲ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ. ಪ್ರಸ್ತುತ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ. ಅಕ್ಷರ ಪ್ರೀತಿ ಅಪಾರ. ಆಗೀಗ ಅನುಭೂತಿಗೆ ...

READ MORE

Related Books